ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು?: ದಿನೇಶ್ ಗುಂಡೂರಾವ್ ಪ್ರಶ್ನೆ

Update: 2022-08-16 07:17 GMT

ಬೆಂಗಳೂರು:  ನೆಹರೂ ಸ್ವಾತಂತ್ರ್ಯಕ್ಕಾಗಿ ಏನು ಹೋರಾಟ ಮಾಡಿದ್ದಾರೆ ಎಂದು BJPಯವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯನ್ನು ನೆಹರೂ ಹೋರಾಟದ ಬಗ್ಗೆ ನಿನ್ನೆಯಷ್ಟೆ ಮಾತಾಡಿದ ಪ್ರಧಾನಿ‌‌ ಮೋದಿಯವರ ಬಳಿ ಕೇಳಲಿ ಎಂದು ಕಾಂಗ್ರಸ್ ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ನೆಹರೂ ಹೋರಾಟದ ಬಗ್ಗೆ ಪ್ರಶ್ನಿಸುವ BJPಯವರು ಸಾವರ್ಕರ್ ಹೋರಾಟದ ಬಗ್ಗೆಯೂ ಹೇಳಲಿ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು?' ಎಂದು ಪ್ರೆಶ್ನೆ ಮಾಡಿದ್ದಾರೆ. 

''ದೇಶದ ಸ್ವಾತಂತ್ರ್ಯ ಸಂಗ್ರಾಮ ಏಕವ್ಯಕ್ತಿ ಪ್ರದರ್ಶನವಾಗಿರಲಿಲ್ಲ. ಹಲವು ಮಹನೀಯರ‌ ಸಾಂಘಿಕ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಗಾಂದೀಜಿ, ನೆಹರೂ, ಆಝಾದ್, ಪಟೇಲ್, ಅಂಬೇಡ್ಕರ್, ಭಗತ್‌‌ ಸಿಂಗ್ ಸೇರಿದಂತೆ ಹಲವು ನಾಯಕರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತೇ ಹೊರತು, ಬ್ರಿಟಿಷರಿಗೆ ಬರೆದ ಕ್ಷಮಾಪಣೆ ಪತ್ರದಿಂದಲ್ಲ'' ಎಂದು  ದಿನೇಶ್ ಗುಂಡೂರಾವ್ ಟ್ವೀಟಿಸಿದ್ದಾರೆ. 

ಇದನ್ನೂ ಓದಿ:  ಸ್ವಾತಂತ್ರ್ಯ ಸಂಭ್ರಮ: ಶ್ರೀಲಂಕಾ ಅಧ್ಯಕ್ಷರಿಂದ ಜವಾಹರಲಾಲ್ ನೆಹರೂ ಗುಣಗಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News