ಸೋಮವಾರಪೇಟೆ | ಬೀಟೆ ಮರಗಳ ಅಕ್ರಮ ಕಡಿತಲೆ: ಆರೋಪಿಗಳ ಬಂಧನ

Update: 2022-08-16 10:30 GMT

ಮಡಿಕೇರಿ ಆ.16 : ಸೋಮವಾರಪೇಟೆ ತಾಲೂಕಿನ ಬಾಣಾವರ ವ್ಯಾಪ್ತಿಯ ದೊಡ್ಡೊಬ್ಬರು ಗ್ರಾಮದ ನಿವಾಸಿಯೊಬ್ಬರ ಜಾಗದಲ್ಲಿದ್ದ ಬೀಟೆ ಮರವನ್ನು ಅಕ್ರಮವಾಗಿ ಕಡಿತಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಬಸವಹಳ್ಳಿ ನಿವಾಸಿ ಎ.ಜಿ.ಅಜಿತ್ (34) ಹಾಗೂ ಕಲ್ಕಂದೂರು ಗ್ರಾಮದ ಕೆ.ಎಂ.ನಿಖಿಲ್ (28)  ಬಂಧಿತ ಆರೋಪಿಗಳಾಗಿದ್ದು, ಎ.ಟಿ.ಸೋಮಶೇಖರ್ (27) ಎಂಬಾತ ತಲೆ ಮರೆಸಿಕೊಂಡಿದ್ದಾನೆ. 

ಬೀಟೆ ಮರದ 5 ನಾಟಾಗಳು ಮತ್ತು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  

ಕಾರ್ಯಾಚಣೆಯಲ್ಲಿ ಸೋಮವಾರಪೇಟೆ ಆರ್‍ಎಫ್‍ಒ ಚೇತನ್ ಹೆಚ್.ಪಿ, ಡಿವೈಆರ್‍ಎಫ್‍ಒ ರಾಕೇಶ್ ಹೆಚ್.ಎಂ, ಅರಣ್ಯ ರಕ್ಷಕರಾದ ಸದಾನಂದ ಹಿಪ್ಪರಗಿ, ಪ್ರಸಾದ್ ಕುಮಾರ್, ಪ್ರಕಾಶ್, ಅರಣ್ಯ ವೀಕ್ಷಕರಾದ ಆಂಥೋನಿ ಹಾಗೂ ಕೆ.ಎ.ವಿಕಾಸ್ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News