​ಶಿವಮೊಗ್ಗ ಬಿಟ್ಟು ಈಶ್ವರಪ್ಪ ಹೊರಗಿದ್ದರೆ ಆ ಊರಿಗೇ ಒಳ್ಳೆಯದು: ಸಿ.ಎಂ. ಇಬ್ರಾಹಿಂ

Update: 2022-08-16 11:14 GMT

ಬೆಂಗಳೂರು: ಸಾವರ್ಕರ್ ಬ್ಯಾನರ್ ವಿಚಾರಕ್ಕೆ ಶಿವಮೊಗ್ಗ (Shivamogga) ನಗರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C. M. Ibrahim) ಪ್ರತಿಕ್ರಿಯಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ,' ಶಿವಮೊಗ್ಗದಲ್ಲೇ ಪದೇ ಪದೇ ಇಂಥ ಘಟನೆಗಳು ಯಾಕೆ ನಡೆಯತ್ತಿದೆ?. ಈಶ್ವರಪ್ಪನವರಿಗೆ (Eshwarappa) ಶಿವಮೊಗ್ಗದಲ್ಲಿ ಸ್ವಲ್ಪ ಶೆಕೆ ಜಾಸ್ತಿ ಆಗಿದೆ. ಹಾಗಾಗಿ ಒಂದಾರು ತಿಂಗಳು ಆ ಊರು ಬಿಟ್ಟು ಹೊರಗಿದ್ದರೆ ಆ ಊರಿಗೇ ಒಳ್ಳೆಯದು' ಎಂದು ವ್ಯಂಗ್ಯವಾಡಿದರು. 

'ಸಾವರ್ಕರ್ ಬ್ಯಾನರ್ ಹಾಕುವುದು ತಪ್ಪು, ಸರಿ ಬೇರೆ ವಿಚಾರ. ಆದರೆ, ಬ್ಯಾನರ್ ಹರಿದಾಕುವಂತ ಅವಶ್ಯಕತೆ ಇರಲಿಲ್ಲ. ಇಷ್ಟ ಇಲ್ಲಾಂದರೆ ಹಾಕಬೇಡಿ ಎಂದು ಮನವಿ ಮಾಡಬಹುದಿತ್ತು' ಎಂದು ಇದೇ ವೇಳೆ ತಿಳಿಸಿದರು. 

ಇದನ್ನೂ ಓದಿ:  ಮೈಸೂರು: ರಸ್ತೆ ಅಗಲೀಕರಣಕ್ಕಾಗಿ 97 ವರ್ಷ ಹಳೆಯ ಮಸೀದಿ ಕಟ್ಟಡ ತೆರವುಗೊಳಿಸಿದ ಮುಸ್ಲಿಮರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News