ಸರ್ಕಾರದ ಕುರಿತ ಹೇಳಿಕೆ: ವೈರಲ್ ಆಗುತ್ತಿರುವ ಆಡಿಯೋ ನನ್ನದೇ ಎಂದ ಸಚಿವ ಮಾಧುಸ್ವಾಮಿ

Update: 2022-08-16 12:50 GMT

ಬೆಂಗಳೂರು: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhu Swamy) ಅವರು, ವ್ಯಕ್ತಿಯೊಬ್ಬರ ಜೊತೆಗೆ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿ ಖುದ್ದು  ಸಚಿವ ಮಾಧುಸ್ವಾಮಿ ಅವರೇ ಪ್ರತಿಕ್ರಿಯಿಸಿದ್ದಾರೆ. 

'ವೈರಲ್ ಆಗುತ್ತಿರುವ ಆಡಿಯೋ ನನ್ನದೇ. ಆದರೆ, ನಾನು ಪೋನ್ ನಲ್ಲಿ ಮಾತನಾಡಿರುವ ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ.  

''ನನಗೆ ಯಾರೋ ರೈತ ಅಂಥ ಹೇಳಿಕೊಂಡು ಡಿಸಿಸಿ ಬ್ಯಾಂಕ್ ನಲ್ಲಿ ನನಗೆ ಅನ್ಯಾಯ ಆಗಿದೆ ಎಂದು ಹೇಳಿದಾಗ ಒತ್ತಡದಿಂದ ಆತನೊಂದಿಗೆ ಏನೋ ಹೇಳಿರಬಹುದು. ನಾನು ಏನು ಹೇಳಿದ್ದೇನೋ ಅದೂ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಆಡಿಯೋ ವೈರಲ್ ಆದ ಬಳಿಕವೇ ಈ ಬಗ್ಗೆ ಗೊತ್ತಾಯಿತು.'' ಎಂದು ಹೇಳಿದರು. 

‘ಸರಕಾರ ನಡೆಸುತ್ತಿಲ್ಲ, ಬದಲಿಗೆ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ' ಎಂದು ಸಚಿವ ಮಾಧುಸ್ವಾಮಿ ಅವರು ಹೇಳಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ:   ಸರಕಾರ ನಡೆಸುತ್ತಿಲ್ಲ, ಮ್ಯಾನೇಜ್ ಮಾಡ್ತೀದ್ದೀವಿ ಅಷ್ಟೇ: ಸಚಿವ ಮಾಧುಸ್ವಾಮಿ ಅವರದ್ದೆನ್ನಲಾದ ಆಡಿಯೋ ವೈರಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News