RSSಗೆ ತಲೆಬಾಗುವುದಾದರೆ, ಮೊದಲು ಸಿಎಂ ಕುರ್ಚಿ ಖಾಲಿ ಮಾಡಿ: ಬೊಮ್ಮಾಯಿ ವಿರುದ್ಧ ಬಿ.ಕೆ ಹರಿಪ್ರಸಾದ್ ಆಕ್ರೋಶ

Update: 2022-08-16 13:47 GMT

ಬೆಂಗಳೂರು: ತಲೆಬಾಗಬೇಕಿರುವುದು ಸಂವಿಧಾನಕ್ಕೆ ಹೊರತು, ಸಂವಿಧಾನ ವಿರೋಧಿ RSSಗೆ ಅಲ್ಲ ಎಂದು ಸಿಎಂ ಬೊಮ್ಮಾಯಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. 

ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಅವರು,  'ದೇಶ ವಿರೋಧಿ ಕೃತ್ಯಗಳನ್ನ ನಡೆಸುವ ಸಂಘಟನೆಗೆ ಬೆಂಬಲಿಸುವುದು,ನಿಮ್ಮ ಸ್ಥಾನಕ್ಕೆ,ಘನತೆಗೆ ತಕ್ಕುದಲ್ಲ. ಗುಲಾಮಗಿರಿ ಮಾಡುವುದೇ ಆದರೆ ಸಿಎಂ ಕುರ್ಚಿ ಖಾಲಿ ಮಾಡಿ ಮೊದಲು' ಎಂದು ಕಿಡಿಗಾರಿದ್ದಾರೆ.

''ಆರೆಸ್ಸೆಸ್ ವಿಚಾರ, ಆದರ್ಶ, ದೇಶಭಕ್ತಿಗೆನಾನು ತಲೆಬಾಗಿದ್ದೇನೆ. ಆರೆಸೆಸ್ಸ್ ತತ್ವ, ಆದರ್ಶದ ಹಿನ್ನೆಲೆಯಲ್ಲಿ ದೇಶ ಕಟ್ಟಲು ಬದ್ಧನಾಗಿದ್ದೇನೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿಕೆ ನೀಡಿದ್ದರು.  

ಇದನ್ನೂ ಓದಿ: ಆರೆಸ್ಸೆಸ್ ಗೆ ತಲೆಬಾಗಿರುವೆ ಎಂಬ ಹೇಳಿಕೆ: ಸಿಎಂ ಬೊಮ್ಮಾಯಿ ವಿರುದ್ಧ ರಾಜ್ಯಪಾಲರಿಗೆ ದೂರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News