ನರಗುಂದದ ಸಮೀರ್ ಹತ್ಯೆ ಪ್ರಕರಣ | ದೂರು ವಾಪಸ್ ಪಡೆಯುವಂತೆ ಕುಟುಂಬಕ್ಕೆ ಜೀವ ಬೆದರಿಕೆ: FIR ದಾಖಲು

Update: 2022-08-16 17:30 GMT
(ಹತ್ಯೆಗೀಡಾದ ಸಮೀರ್ ಶಹಾಪುರ)

ನರಗುಂದ, ಆ.16: ನರಗುಂದ ಹತ್ಯೆಯಾದ ಸಮೀರ್ ಶಹಾಪುರ ಅವರ ತಂದೆಗೆ ಕೇಸ್ ವಾಪಸ್ ಪಡೆದುಕೊಳ್ಳುವಂತೆ ಜೀವಬೆದರಿಕೆ ಹಾಕಿರುವ ಘಟನೆ ಸೋಮವಾರ ನಡೆದಿದೆ. 

ಈ ಸಂಬಂಧ ನರಗುಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸಮೀರ್ ಅವರ ತಂದೆ ದೂರು ನೀಡಿದ್ದು, ನರಗುಂದದ ಜನತಾ ಕಾಲೊನಿಯ ವಿರೂಪಾಕ್ಷ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ವಿವರ: 15-08-2022 ರಂದು (ಸೋಮವಾರ) ಮದ್ಯಾಹ್ನ ವೇಳೆ ಸಮೀರ್ ಅವರ ತಂದೆ ಸುಬಾನ್ ಸಾಬ್ ನರಗುಂದ ಪಟ್ಟಣದ ಬಸ್ ನಿಲ್ದಾಣ ಬಳಿಯ ತನ್ನ ಸಂಬಂಧಿಕರೊಬ್ಬರ ಹೊಟೇಲ್ ನಿಂದ  ಊಟವನ್ನು ತೆಗೆದುಕೊಂಡು ಮನೆಯ ಕಡೆಗೆ ತೆರಳುತ್ತಿದ್ದಾಗ ವಿರೂಪಾಕ್ಷ ಎಂಬಾತ ನನ್ನತ್ತ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ನಿನ್ನ ಮಗನ ಹತ್ಯೆ ಸಂಬಂಧದ ಕೇಸ್ ವಾಪಸ್ ಪಡೆಯುವಂತೆ ಹೇಳಿದ್ದಾನೆ. ಕೇಸ್ ವಾಪಸ್ ಪಡೆಯದೇ ಇದ್ದಲ್ಲಿ ನಿನ್ನ ಇತರ ಇಬ್ಬರು ಮಕ್ಕಳನ್ನೂ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಸುಬಾನ್ ಸಾಬ್ ದೂರಿನ್ಲಲಿ ತಿಳಿಸಿದ್ದಾರೆ. 

ಜನವರಿ ತಿಂಗಳಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬಜರಂಗದಳ ಕಾರ್ಯಕರ್ತರು ಸಮೀರ್ ಶಹಪುರ ಅವರನ್ನು ಕೊಲೆಗೈದು ಇನ್ನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. 

ಇದನ್ನೂ ಓದಿ:  ನರಗುಂದ ಸಮೀರ್ ಕೊಲೆ ಪ್ರಕರಣ: ಬಜರಂಗ ದಳದ ಕಾರ್ಯಕರ್ತರಾದ ನಾಲ್ವರು ಆರೋಪಿಗಳ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News