12 ಶಿಕ್ಷಣಾಧಿಕಾರಿಗಳ ವರ್ಗಾವಣೆ
Update: 2022-08-18 18:05 GMT
ಬೆಂಗಳೂರು, ಆ.18: ಸಾರ್ವಜನಿಕ ಶಿಕ್ಷಣ ಇಲಾಖೆಯ 12 ಮಂದಿ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅಧಿಸೂಚನೆ ಹೊರಡಿಸಿದ್ದಾರೆ.
ಎಂ. ಉದಯ್ ಕುಮಾರ್, ನಾಗಮಣಿ ಎಂ., ಟಿ.ಆರ್. ಸ್ವಾಮಿ, ಶಿವರಾಜು ಎಂ., ಲಕ್ಷ್ಮಣ ವಿ ಯಕ್ಕುಂಡಿ, ಲೀಲಾವತಿ ಎಸ್ ಹಿರೇಮಠ, ಎನ್.ಆರ್ ಪಾಟೀಲ, ಸಿ.ಎಚ್. ಕಾಳೀರಯ್ಯ, ಅಂತೋಣಿರಾಜ್, ಶರಶ್ಚಂದ್ರ, ಶ್ರೀನಿವಾಸ್ ಎಚ್., ತಿಪ್ಪೇಸ್ವಾಮಿ ಸಿ.ಎಂ. ಅವರನ್ನು ವರ್ಗಾವಣೆ ಮಾಡಿ, ಸ್ಥಳ ನಿಯುಕ್ತಿ ಮಾಡಲಾಗಿದೆ.