ಸಾಗರ: ಬೈಕ್- ಕಾರು ನಡುವೆ ಅಪಘಾತ, ಯುವಕ ಮೃತ್ಯು
Update: 2022-08-20 12:04 GMT
ಸಾಗರ, ಆ.20 : ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತಲದಲ್ಲಿ ಬ್ಯಾಂಕ್ ಉದ್ಯೋಗಿಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಕಿಶನ್ ಎಂದು ಗರುತಿಸಲಾಗಿದೆ. ಕಿಶನ್ ರವರು ಬ್ಯಾಕೋಡು ಸಮೀಪದ ಸುಳ್ಳಳ್ಳಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಸಾಗರದಿಂದ ಸುಳ್ಳಳ್ಳಿ ಬ್ಯಾಂಕ್ ಗೆ ತೆರಳುವಾಗ ಬ್ಯಾಕೋಡು ಸಮೀಪ ಈ ಅಪಘಾತ ಸಂಭವಿಸಿದೆ.
ಅಪಘಾತದ ಸಂದರ್ಭದಲ್ಲಿ ಕಿಶನ್ ಗೆ ತೀವ್ರ ರಕ್ತಸ್ರಾವವಾಗಿದ್ದು, ನಂತರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.