ಕೆರೆ ಭೂಮಿ ಸ್ವಾಧೀನಾನುಭವ ಹಕ್ಕುಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವಂತಿಲ್ಲ: ಹೈಕೋರ್ಟ್

Update: 2022-08-21 14:24 GMT

ಬೆಂಗಳೂರು, ಆ.21: ಆನೇಕಲ್ ವ್ಯಾಪ್ತಿಯ ನೆಕ್ಕುಂದಿ ದೊಮ್ಮಸಂದ್ರ ಗ್ರಾಮದಲ್ಲಿ ಕೆರೆಗೆ ಸೇರಿದ 14 ಎಕರೆ ಭೂಮಿಯ ಸ್ವಾಧೀನಾನುಭವ ಹಕ್ಕುಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿ ಭೂ ನ್ಯಾಯಾಧೀಕರಣ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. 

ಭೂ ನ್ಯಾಯಾಧೀಕರಣದ ತೀರ್ಪು ರದ್ದು ಕೋರಿ ರಾಜ್ಯ ಸರಕಾರ ಮತ್ತು ನೆರಿಗಾ ಗ್ರಾಮಸ್ಥರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. 

ಈ ಭೂಮಿಯು ಕೆರೆ ಜಾಗವೆಂದೇ ನಮೂದಾಗಿದೆ. ಕಂದಾಯ ವರ್ಗೀಕರಣದಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ, ಈ ಜಾಗ ಕೆರೆಗೆ ಸೇರಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿ ಭೂ ನ್ಯಾಯಾಧೀಕರಣದ ಆದೇಶ ರದ್ದು ಮಾಡಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News