7 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವರ್ಗಿ: ಹಾಸನ ಜಿಲ್ಲಾಧಿಕಾರಿಯಾಗಿ ಎಂ.ಎಸ್.ಅರ್ಚನಾ ನಿಯೋಜನೆ

Update: 2022-08-21 15:13 GMT

ಬೆಂಗಳೂರು, ಆ. 21: ಏಳು ಜನ ಐಎಎಸ್ (IAS) ಅಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಪಿಲ್ ಮೋಹನ್-ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಎಸ್.ಸೆಲ್ವಕುಮಾರ್-ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿಯಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹೊಣೆಯನ್ನು ಮುಂದುವರಿಸಲಾಗಿದೆ. ಎಸ್.ಆರ್.ಉಮಾಶಂಕರ್-ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ.

ವಿ.ಪೊನ್ನುರಾಜ್-ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಆರ್. ಗಿರೀಶ್- ಕರ್ನಾಟಕ ಕೈಗಾರಿಕಾಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಎನ್.ಶಿವಶಂಕರ್-ನಿರ್ದೇಶಕ, ಪೌರಾಡಳಿತನಿರ್ದೇಶನಾಲಯ, ಎಂ.ಎಸ್.ಅರ್ಚನಾ-ಜಿಲ್ಲಾಧಿಕಾರಿ ಹಾಸನ ಇಲ್ಲಿಗೆ ನಿಯೋಜನೆ ಮಾಡಲಾಗಿದೆ.

ಹಾಸನ ಜಿಲ್ಲಾಧಿಕಾರಿಯಾಗಿದ್ದ ಆರ್. ಗಿರೀಶ್ ಅವರು ಕರ್ನಾಟಕ ಕೈಗಾರಿಕಾಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ಎಂ.ಎಸ್.ಅರ್ಚನಾ ಅವರನ್ನು ಹಾಸನಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News