ಬೆಳಗಾವಿ: ಚಿರತೆ ಸೆರೆಗಾಗಿ ಆನೆಗಳಿಂದ ಮುಂದುವರಿದ ಕಾರ್ಯಾಚರಣೆ; 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ

Update: 2022-08-25 10:35 GMT

ಬೆಳಗಾವಿ, ಆ.25: ಜಿಲ್ಲೆಯ ಗಾಲ್ಫ್ ಮೈದಾನಕ್ಕೆ ನುಗ್ಗಿದ ಚಿರತೆ ಸೆರೆಗಾಗಿ ಆನೆಗಳಿಂದ ಇಂದು ಕೂಡ ಕಾರ್ಯಾಚರಣೆ ಆರಂಭಗೊಳ್ಳಲಿದೆ.

ಕಳೆದ ಕೆಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಇನ್ನೂ ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿಕೊಂಡಿದ್ದು, ಮಂಗಳವಾರ ಚಿರತೆ (Leopard) ಸೆರೆಗೆ ಶಿವಮೊಗ್ಗದಿಂದ ವಿಶೇಷ ತಂಡ ಬೆಳಗಾವಿಗೆ ಹೊರಟಿದೆ.

ಈ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಸರ್ಕಾರಿ,‌ ಖಾಸಗಿ ಸೇರಿ 22 ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಆನ್ ಲೈನ್​ನಲ್ಲೇ ತರಗತಿಗಳನ್ನು ನಡೆಸಲು ತಿಳಿಸಲಾಗಿದೆ. 

ಸಕ್ರೇಬೈಲು ಆನೆ ಬಿಡಾರದ ಅರ್ಜುನ ಹಾಗೂ ಆಲೆ ಆನೆಗಳೂ ಸೇರಿ ವೈದ್ಯರು, ಸಹಾಯಕ ಸಿಬ್ಬಂದಿ, ಮಾವುತರು, ಕಾವಾಡಿಗಳು ಮತ್ತು ಬಿಡಾರದ ಸಹಾಯಕ ಸಿಬ್ಬಂದಿ ಸೇರಿದಂತೆ 8 ಜನರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. 

ಇದನ್ನೂ ಓದಿ: ಶಿವಮೊಗ್ಗ | ಚಿರತೆ ಸೆರೆಗೆ ಸಕ್ರೆಬೈಲ್‌ ಶಿಬಿರದಿಂದ ಬೆಳಗಾವಿಯತ್ತ ಹೊರಟ 2 ಆನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News