ಶಿವಮೊಗ್ಗ ಚೂರಿ ಇರಿತ ಪ್ರಕರಣ: ಆರೋಪಿಗಳ ವಿರುದ್ಧ UAPA ಅಡಿ ಕೇಸ್ ದಾಖಲು

Update: 2022-08-26 16:23 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಆ.26: ಇತ್ತೀಚೆಗೆ  ಪ್ರೇಮ್‌ಸಿಂಗ್‌ ಎಂಬ ಯುವಕನಿಗೆ ಚೂರಿ ಇರಿದ ಆರೋಪಿಗಳ ವಿರುದ್ಧ ಯುಎಪಿಎ 1967 ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ತನ್ವೀರ್‌ ಅಹಮದ್‌(22), ನದೀಮ್‌ ಫೈಝಲ್‌(25) ಹಾಗೂ ಅಬ್ದುಲ್‌ ರೆಹಮಾನ್‌ (25) ಹಾಗೂ ಮೊಹಮ್ಮದ್‌ ಜಬೀ ಅಲಿಯಾಸ್‌ ಚರ್ಬಿ (30) ಎಂಬುವವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗುತ್ತಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯಂದು ಸಾವರ್ಕರ್‌ ಫ್ಲೆಕ್ಸ್‌ ತೆರವು ಗಲಾಟೆ ಸಂದರ್ಭದಲ್ಲಿಯೇ ಗಾಂಧಿ ಬಝಾರ್‌ನಲ್ಲಿ ಪ್ರೇಮ್‌ ಸಿಂಗ್‌ ಎಂಬುವವರಿಗೆ ಚೂರಿಯಿಂದ ಇರಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News