ಭಾರೀ ಮಳೆ: ಚಾಮರಾಜನಗರ ಜಿಲ್ಲಾದ್ಯಂತ ಇಂದು(ಆ.29) ಶಾಲೆ-ಕಾಲೇಜುಗಳಿಗೆ ರಜೆ
Update: 2022-08-29 04:14 GMT
ಚಾಮರಾಜನಗರ, ಆ.29: ಜಿಲ್ಲಾದ್ಯಂತ ಸೋಮವಾರ ಮುಂಜಾನೆಯಿಂದ ಮಳೆ ಮತ್ತಷ್ಟು ಬಿರುಸುಗೊಂಡ ಹಿನ್ನೆಲೆಯಲ್ಲಿ ಇಂದು 1ನೇ ತರಗತಿಯಿಂದ ಪದವಿ ಕಾಲೇಜುವರೆಗೆ ರಜೆ ಘೋಷಿಸಲಾಗಿದೆ.
ಕಳೆದ ರಾತ್ರಿಯಿಂದಲೇ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮುಂಜಾನೆಯಿಂದ ಇದು ಮತ್ತಷ್ಟು ಬಿರುಸು ಪಡೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರೂಲತಾ ಸೋಮಲ್ ಅವರು 1ನೇ ತರಗತಿಯಿಂದ ಪದವಿವರೆಗಿನ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.
ಇದನ್ನೂ ಓದಿ | ಪಯಸ್ವಿನಿ ನದಿಯಲ್ಲಿ ಪ್ರವಾಹ: ಕೊಯನಾಡು ಸೇರಿ ಹಲವೆಡೆ ನುಗ್ಗಿದ ನೀರು
ಮಳೆ ಆರ್ಭಟ: ಚಾಮರಾಜನಗರ ಜಿಲ್ಲಾದ್ಯಂತ ಕಳೆದ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಕರ್ನಾಟಕ -ತಮಿಳುನಾಡು ಗಡಿಭಾಗದ ಜನತೆ ತತ್ತರಿಸಿದ್ದಾರೆ.