ಮಠದ ಸ್ವಾಮೀಜಿಗಳು ನನಗೆ ದೇವರ ಸಮಾನ, ಮುರುಘಾ ಶ್ರೀಗಳ ಬಗ್ಗೆ ಗೌರವ ಇದೆ: ಕೆ.ಎಸ್.ಈಶ್ವರಪ್ಪ

Update: 2022-09-03 07:41 GMT

ಶಿವಮೊಗ್ಗ: 'ಮಠದ ಸ್ವಾಮೀಜಿಗಳು ನನಗೆ ದೇವರ ಸಮಾನ. ಮುರುಘಾ ಶ್ರೀಗಳ ಬಗ್ಗೆಯು ಗೌರವ ಇದೆ' ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, 'ಮುರುಘಾ ಶ್ರೀಗಳ ವಿರುದ್ಧದ ಪ್ರಕರಣದ ತನಿಖೆಯಲ್ಲಿ ಅದು ಸತ್ಯವೋ ಸುಳ್ಳೋ ಎಂಬುದು ಹೊರಬರಲಿ. ಈಗಲೆ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಸಾಧು ಸಂತರೇ ಹಿಂದೂ ಧರ್ಮಕ್ಕೆ ಪ್ರೇರಣೆಯಾಗಿದ್ದಾರೆ. ಮುರುಘಾ ಶ್ರೀಗಳ ಮೇಲಿನ ಆರೋಪ ಸುಳ್ಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದರು. 

ರಾಜಕೀಯ ಚರ್ಚೆ ಇರಲಿಲ್ಲ:  ನರೇಂದ್ರ ಮೋದಿ ಅವರು ಮಂಗಳೂರು ಭೇಟಿ ವೇಳೆ ಭಾಷಣದಲ್ಲಿ ರಾಜಕೀಯ ಚರ್ಚೆ ಮಾಡಲಿಲ್ಲ. 3800 ಕೋಟಿ ರೂ. ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡಿದರು. ಕೋರ್ ಕಮಿಟಿ ಸಭೆಯಲ್ಲಿಯು ರಾಜಕೀಯದ ಬಗ್ಗೆ ಚರ್ಚೆ ಮಾಡಲಿಲ್ಲ. ಇಂತಹ ರಾಷ್ಟ್ರಭಕ್ತನನ್ನು ಪಡೆದಿದ್ದು ನಮ್ಮ ಪುಣ್ಯ. ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಹೋಗಿರುವುದು ನಮಗೆ ಸ್ಪೂರ್ತಿ ಸಿಕ್ಕಂತಾಗಿದೆ ಎಂದರು.

75 ಕೋಟಿ ರೂ. ಖರ್ಚು ಮಾಡಿ ಸಿದ್ದರಾಮೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಜನರನ್ನು ಕರೆದುಕೊಂಡು ಬಂದರು. ಆದರೆ ಬಿಜೆಪಿ ಮಂಗಳೂರಿನಲ್ಲಿ ಕಾರ್ಯಕರ್ತರ ಶಕ್ತಿಯಿಂದ ಜನರು ತಾವಾಗಿಯೆ ಬಂದರು. ಬರಿ ಮಂಗಳೂರಿಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದರು ಎಂದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News