ಆಡಿಯೊ ವೈರಲ್ ವಿಚಾರ; ಶಾಸಕ ದಢೇಸಗೂರು ಮೇಲಿನ ಆರೋಪ ತಳ್ಳಿ ಹಾಕುವುದಿಲ್ಲ, ವಿಚಾರಣೆ ನಡೆಯಲಿ ಎಂದ ಸಚಿವ ಆನಂದ್ ಸಿಂಗ್

Update: 2022-09-05 09:45 GMT
  ಆನಂದ್ ಸಿಂಗ್  |  ಬಸವರಾಜ ದಢೇಸುಗೂರು

ಕೊಪ್ಪಳ: ಪಿಎಸ್ಐ‌ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ್ದು ಎನ್ನಲಾದ ಕನಕಗಿರಿ ಬಿಜೆಪಿ (BJP) ಶಾಸಕ  ಬಸವರಾಜ ದಢೇಸುಗೂರು ಅವರ  ಫೋನ್ ಸಂಭಾಷಣೆಯ ಆಡಿಯೊ ಒಂದು ವೈರಲ್ ಆಗಿದ್ದು, ಈ ಕುರಿತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. 

ಸುದ್ದಿಗಾರರ ಜೊತೆ ಮಾತನಾಡಿರುವ ಸಚಿವ ಆನಂದ್ ಸಿಂಗ್ , ಶಾಸಕ ಬಸವರಾಜ ದಢೇಸಗೂರ ವಿರುದ್ಧ ಕೇಳಿ ಬಂದಿರುವ ಆರೋಪ ತಳ್ಳಿ ಹಾಕುವುದಿಲ್ಲ. ಈ ಕುರಿತು ವಿಚಾರಣೆ ನಡೆಯಲಿ' ಎಂದು ಹೇಳಿದರು. 

ಪಿಎಸ್ಐ‌ ನೇಮಕಾತಿ ಮಾಡಿಸಿಕೊಡುವುದಾಗಿ‌ ಹೇಳಿ ವ್ಯಕ್ತಿಯೊಬ್ಬರಿಂದ 15 ಲಕ್ಷ ರೂ. ಪಡೆದ ಬಗ್ಗೆ ಶಾಸಕ ಬಸವರಾಜ ದಢೇಸುಗೂರು ಅವರ ಮೇಲೆ ಆರೋಪ ಕೇಳಿಬಂದಿತ್ತು.

ಇನ್ನು ವೈರಲ್ ಆದ ಆ ಆಡಿಯೋದಲ್ಲಿ ಇರುವ ಧ್ವನಿ ನನ್ನದೇ. ಆದರೆ, ಅದು ಪ್ರಕರಣವೊಂದರ ಕುರಿತು ಮಧ್ಯಸ್ತಿಕೆ ವಹಿಸಲು ನನ್ನೊಂದಿಗೆ ಮಾತನಾಡಿದ್ದರು. ಅದ ಎಂದು ಬಸವರಾಜ ದಢೇಸುಗೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News