ಪುನೀತ್ ಅವರ 'ಶಕ್ತಿಧಾಮ'ದ ಸ್ವಯಂಸೇವಕನಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ: ನಟ ವಿಶಾಲ್
Update: 2022-09-10 12:36 GMT
ಮೈಸೂರು,ಸೆ.10: ಖ್ಯಾತ ತಮಿಳು ನಟ ವಿಶಾಲ್ ಶನಿವಾರ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ ಇಲ್ಲಿನ ಮಕ್ಕಳೊಡನೆ ಮಾತುಕತೆ ನಡೆಸಿ ಸಂತಸ ಪಟ್ಟರು.
ಪುನೀತ್ ರಾಜ್ ಕುಮಾರ್ ನಿಧನರಾದ ವೇಳೆ ಅಪ್ಪು ಒತ್ತಾಸೆಯಾಗಿದ್ದ ಶಕ್ತಿಧಾಮಕ್ಕೆ ಸಹಾಯ ಮಾಡುವುದಾಗಿ ವಿಶಾಲ್ ಹೇಳಿದ್ದರು.
ಇಂದು ಶಕ್ತಿಧಾಮಕ್ಕೆ ಬಂದ ವಿಶಾಲ್, ಮಕ್ಕಳೊಡನೆ ಕೆಲಕಾಲ ಮಾತುಕತೆ ನಡೆಸಿ, ಸಮಯ ಕಳೆದರು. ಬಳಿಕ ನಿರ್ಮಾಣ ಮಾಡುತ್ತಿರುವ ಶಾಲೆ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಟ್ರಸ್ಟಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ವಿಶಾಲ್, ';ಶಕ್ತಿಧಾಮಕ್ಕೆ ಭೇಟಿ ನೀಡಿದಾಗ ನನಗೆ ಒಂದು ವಿಶಿಷ್ಟ ಅನುಭವವಾಯಿತು. ಶಕ್ತಿಧಾಮದ ಮಕ್ಕಳಲ್ಲಿ ದೇವರನ್ನು ನೋಡಿದೆ. ಭವಿಷ್ಯತ್ತಿನಲ್ಲಿ ಶಕ್ತಿಧಾಮದ ಮಕ್ಕಳು ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಶಕ್ತಿಧಾಮದ ಸ್ವಯಂ ಸೇವಕನಾಗಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಇದಕ್ಕೆ ಡಾ.ರಾಜ್ ಕುಟುಂಬ ಅನುಮತಿ ನೀಡಬೇಕಿದೆ ಎಂದು ವಿಶಾಲ್ ತಿಳಿಸಿದರು.