ಶಿವಾರಗುಡ್ಡದಲ್ಲಿ ಅದ್ದೂರಿ ಗಿರಿಜನ ಉತ್ಸವಕ್ಕೆ ಚಾಲನೆ

Update: 2022-09-11 15:41 GMT

ಮಂಡ್ಯ: ಮದ್ದೂರು ತಾಲೂಕಿನ ಶಿವಾರಗುಡ್ಡ ವಿದ್ಯಾಪೀಠ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ 2022-23ನೇ ಸಾಲಿನ ಗಿರಿಜನ ಉತ್ಸವಕ್ಕೆ ವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಉಮಾಪತಿ ರೆಡ್ಡಿ ರವಿವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ಜವಾಹರ ನವೋದಯ ವಿದ್ಯಾಲಯದಲ್ಲಿ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಬಹಳ ಅಚ್ಚುಗಟ್ಟಾಗಿ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಿರಿಜನ ಉತ್ಸವದ ಆಚರಣೆ ಮಕ್ಕಳಿಗೆ ಬಹಳ ಉಪಯುಕ್ತ ಹಾಗೂ ಉತ್ತಮ ಮನೋರಂಜನೆ ನೀಡಿದಂತಹ ಕಾರ್ಯಕ್ರಮವಾಗಿದೆ ಎಂದರು.

ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಗಿರಿಜನ ಉತ್ಸವದಂತಹ ಅನೇಕ ಜಾನಪದ ಕಾರ್ಯಕ್ರಮಗಳು ಆಯೋಜಿಸಬೇಕು. ಪ್ರಸ್ತುತದಲ್ಲಿರುವ ಯುವ ಸಮುದಾಯಕ್ಕೆ ಇಂತಹ ಉತ್ಸವಗಳ ಅರಿವು ಮೂಡಿಸುವುದು ಬಹಳ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್,  ಉಪನ್ಯಾಸಕರುಗಳಾದ ರವೀಂದ್ರ, ವಿನೀತ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News