ತುಮಕೂರು | ಕಾರು ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

Update: 2022-09-12 07:14 GMT
ಸಾಂದರ್ಭಿಕ ಚಿತ್ರ

ತುಮಕೂರು, ಸೆ.12: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ (Accident) ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ರಿಂಗ್ ರಸ್ತೆಯ ಎಚ್.ಬಿ.ಪೆಟ್ರೋಲ್ ಬಂಕ್ ಸಮೀಪ ಸೋಮವಾರ ಬೆಳಗ್ಗೆ ನಡೆದಿದೆ.

ಮೃತರನ್ನು ತುಮಕೂರಿನ ಸಿ.ಎಂ.ಬಡಾವಣೆಯ ನಿವೃತ್ತ ನೌಕರ ಸಿ.ವೀರನಾಗಪ್ಪ(72) ಎಂದು ಗುರುತಿಸಲಾಗಿದೆ.

ವೀರನಾಗಪ್ಪ ಇಂದು ಬೆಳಗ್ಗೆ 8:30ರ ಸುಮಾರಿಗೆ ರಸ್ತೆಯ ಎಚ್.ಬಿ.ಪೆಟ್ರೋಲ್ ಬಂಕ್ ಸಮೀಪ ಟಿವಿಎಸ್ ಸೂಪರ್ ಎಕ್ಸೆಲ್‍ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಕಾರೊಂದು ಅತೀ ವೇಗದಿಂದ ಢಿಕ್ಕಿ ಹೊಡೆಯಿತೆನ್ನಲಾಗಿದೆ.

ಈ ಸಂಬಂಧ ಸಂಚಾರಿ ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News