ಕೊಟ್ಟ ವಚನ ಉಳಿಸಿಕೊಳ್ಳುವ ‘ಧಮ್’ ಇದೆಯೇ?: ಬಿಜೆಪಿಗೆ ಬಿ.ಕೆ.ಹರಿಪ್ರಸಾದ್ ಪ್ರಶ್ನೆ

Update: 2022-09-12 16:36 GMT

ಬೆಂಗಳೂರು, ಸೆ.12: 'ಕೇಂದ್ರದ ಹಿಂದಿ ಭಾಷೆ ಹೇರಿಕೆ ಎದುರು ಮಂಡಿಯೂರಿರುವ ಬೊಮ್ಮಾಯಿ (Basavaraj Bommai) ಸರಕಾರ, ಕನ್ನಡತನವನ್ನೇ ಮರೆತಿದೆ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಮೋದಿ ಸರಕಾರ ಸರಕಾರಿ ಉದ್ಯೋಗಗಳನ್ನೇ ಸೃಷ್ಟಿಸುತ್ತಿಲ್ಲ, ಇನ್ನೂ ಕೇಂದ್ರದ ನೌಕರಿಗಳಲ್ಲಿ ಪರೀಕ್ಷೆಗೆ ಕನ್ನಡ ಮಾಧ್ಯಮದಲ್ಲಿ ಅವಕಾಶ ಕೊಡಿಸುತ್ತೇವೆ ಎನ್ನುವುದು ಭ್ರಮೆ. ರಾಜ್ಯ ಬಿಜೆಪಿ ಕೊಟ್ಟ ವಚನವನ್ನ ಉಳಿಸಿಕೊಳ್ಳುವ ‘ಧಮ್’ ಇದ್ಯಾ? ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ: ವಿಪಕ್ಷ ನಾಯಕರ ವಿರುದ್ದ ಸಿ.ಟಿ. ರವಿ ಪದಬಳಕೆ ಸರಿಯಲ್ಲ: ಎಚ್.ವಿಶ್ವನಾಥ್ ಆಕ್ಷೇಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News