ಬಿಎಸ್ವೈ ಹಾಗೂ ವಿಜಯೇಂದ್ರ ರಾಜೀನಾಮೆ ಪಡೆಯುವಿರಾ?: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು, ಸೆ.16: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ತನಿಖೆಗೆ ಆದೇಶವಾಗುತ್ತಲೇ ಕೇಂದ್ರ ಸಂಸದೀಯ ಸಮಿತಿಗೆ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕ ಯತ್ನಾಳ್ ಆಗ್ರಹಿಸಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಕಣ್ಣೀರು ಹಾಕಿಸುವ ಪ್ರೋಗ್ರಾಮ್ ಇದೆಯೇ ರಾಜ್ಯ ಬಿಜೆಪಿ? ಯತ್ನಾಳ್ ಹೇಳಿದಂತೆ ಆರೋಪ ಹೊತ್ತಿರುವ ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಪಡೆಯುವಿರಾ? ಎಂದು ಪ್ರಶ್ನಿಸಿದೆ.
371ಜೆ ವಿಶೇಷ ಕೋಶವನ್ನು ಕಲ್ಬುರ್ಗಿಗೆ ಸ್ಥಳಾಂತರ ಮಾಡುತ್ತೇವೆ-ಬಸವರಾಜ ಬೊಮ್ಮಾಯಿ, ಪ್ರತ್ಯೇಕ ಸಚಿವಾಲಯ ಸ್ಥಾಪಿಸುತ್ತೇವೆ-ಯಡಿಯೂರಪ್ಪ. ಹುಸಿ ಭರವಸೆಗಳಿಂದಲೇ ಕಾಲ ತಳ್ಳುತ್ತಿದೆ ರಾಜ್ಯ ಬಿಜೆಪಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮರೀಚಿಕೆಯಾಗಿದೆ. ನಿಮ್ಮ ದಮ್ಮು, ತಾಕತ್ತು ತೋರಿಸಬೇಕಿರುವುದು ಇಂತಹ ಕೆಲಸಗಳಲ್ಲಿ ಅಲ್ಲವೇ ಮುಖ್ಯಮಂತ್ರಿಗಳೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಹುಬೇಡಿಕೆಯ ಉತ್ತರ ಕನ್ನಡ ಭಾಗದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರಕಾರ ನಿರಾಕರಿಸಿದೆ. ಸಂಸ್ಕøತ ವಿವಿಯ 320 ಕೋಟಿಗೆ ಒಪ್ಪಿಗೆ ಕೊಡುವ ಆರ್ಥಿಕ ಇಲಾಖೆ ಆಸ್ಪತ್ರೆಗೆ ಒಪ್ಪದಿರುವುದೇಕೆ? ತಮ್ಮದೇ ಸರಕಾರವನ್ನು ಒಪ್ಪಿಸುವ ತಾಕತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗಿಲ್ಲವೇ? ಮತ ಹಾಕುವಾಗ ರಾಜ್ಯ ಬಿಜೆಪಿಯ ಆದ್ಯತೆಯ ಬಗ್ಗೆ ಜನರು ಚಿಂತಿಸಬೇಕು ಎಂದು ಕಾಂಗ್ರೆಸ್ ಹೇಳಿದೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ಶಿಕ್ಷಣ ಸಚಿವರಾಗಿ ಒಂದಾದರೂ ಘನಕಾರ್ಯ ಮಾಡಿದ್ದೀರಾ? ಮಾಡಿದ್ದಿದ್ದರೆ ತೋರಿಸಿಬಿಡಿ. ಹಲವು ತಿಂಗಳಿಂದ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎನ್ನುತ್ತಲೇ ಬಂದಿರುವ ತಾವು ಆ ನಿಟ್ಟಿನಲ್ಲಿ ಯಾವ ಗಂಭೀರ ಕ್ರಮ ಕೈಗೊಂಡಿದ್ದೀರಿ? ವಿದ್ಯಾರ್ಥಿಗಳಿಗೆ ಶೂ, ಸಮವಸ್ತ್ರ, ಪುಸ್ತಕ ಕೊಡದಿರುವಂತೆ ಶಿಕ್ಷಣವನ್ನೂ ಕೊಡದೆ ವಂಚಿಸುವಿರಾ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ರಾಜಾಹುಲಿ ಆದ್ರೂ ಕಾನೂನಿನ ಮುಂದೆ ಎಲ್ಲರೂ ಒಂದೇ..: ಯಡಿಯೂರಪ್ಪ ರಾಜೀನಾಮೆಗೆ ಬಿಜೆಪಿ ಶಾಸಕ ಯತ್ನಾಳ್ ಆಗ್ರಹ
BSY ವಿರುದ್ಧ ತನಿಖೆಗೆ ಅದೇಶವಾಗುತ್ತಲೇ ಕೇಂದ್ರ ಸಂಸದೀಯ ಸಮಿತಿಗೆ BSY ರಾಜೀನಾಮೆ ನೀಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
— Karnataka Congress (@INCKarnataka) September 16, 2022
BSY ಅವರಿಗೆ ಮತ್ತೊಮ್ಮೆ ಕಣ್ಣೀರು ಹಾಕಿಸುವ ಪ್ರೊಗ್ರಾಮ್ ಇದೆಯೇ @BJP4Karnataka?
ಯತ್ನಾಳ್ ಹೇಳಿದಂತೆ ಆರೋಪ ಹೊತ್ತಿರುವ BSY & BYV ಅವರ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಪಡೆಯುವಿರಾ?#BSYmuktaBJP pic.twitter.com/Xm3JgdzKVF