ಚಿನ್ನದ ಮೇಲೆ ಸಾಲ ಏಕರೂಪ ಬಡ್ಡಿ ಅಸಾಧ್ಯ: ಸಚಿವ ಎಸ್.ಟಿ.ಸೋಮಶೇಖರ್

Update: 2022-09-20 18:03 GMT

ಬೆಂಗಳೂರು, ಸೆ.20: ರಾಜ್ಯದ ಡಿಸಿಸಿ ಬ್ಯಾಂಕ್‍ಗಳು ಚಿನ್ನಾಭರಣದ ಮೇಲೆ ನೀಡುತ್ತಿರುವ ಸಾಲದ ಮೇಲಿನ ಬಡ್ಡಿಯನ್ನು ಏಕರೂಪದಲ್ಲಿರುವಂತೆ ಷರತ್ತು ವಿಧಿಸಲು ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೆಚ್ಚು ಬಡ್ಡಿ ವಿಧಿಸುತ್ತಿರುವ ಬ್ಯಾಂಕ್‍ಗಳು ತಮ್ಮದೇ ಸಮಜಾಯಿಷಿ ನೀಡಿವೆ. ಹೀಗಾಗಿ ಏಕರೂಪದಲ್ಲಿ ಚಿನ್ನಾಭರಣದ ಮೇಲೆ ಬಡ್ಡಿ ನಿಗದಿ ಮಾಡಿ ಎಂದು ಷರತ್ತು ವಿಧಿಸಲು ಸಾಧ್ಯವಿಲ್ಲ ಎಂದರು.

5 ಲಕ್ಷದಿಂದ 40 ಲಕ್ಷ ರೂಪಾಯಿ ವರೆಗೂ ಡಿಸಿಸಿ ಬ್ಯಾಂಕ್‍ಗಳ ಮೂಲಕ ಚಿನ್ನಾಭರಣದ ಮೇಲೆ ಸಾಲ ನೀಡಲಾಗುತ್ತದೆ. ಆಯಾಯ ಡಿಸಿಸಿ ಬ್ಯಾಂಕ್‍ಗಳು ಅವುಗಳ ನಿಯಮಕ್ಕೆ ಅನುಗುಣವಾಗಿ ಬಡ್ಡಿ ವಿಧಿಸುತ್ತಿವೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News