ಸಾಗರ | ಕೆಎಸ್ಸಾರ್ಟಿಸಿ ಬಸ್- ಕಾರು ಢಿಕ್ಕಿ: ಓರ್ವ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ
Update: 2022-09-22 08:53 GMT
ಸಾಗರ : ಇಲ್ಲಿನ ಜೋಗದ ವರ್ಕ್ ಮೆನ್ ಬ್ಲಾಕ್ ಬಳಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಓಮ್ನಿ ಕಾರೊಂದರ ನಡುವೆ ಸಂಭವಿಸಿದ ಅಪಫಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗಳಾದ ಘಟನೆ ಗುರುವಾರ ನಡೆದಿದೆ.
ಕಾರವಾರದಿಂದ ಸಾಗರ ಕಡೆಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ವಡನ್ ಬೈಲ್ ಕಡೆಯಿಂದ ಕಾರ್ಗಲ್ ಕಡೆಗೆ ಸಾಗುತ್ತಿದ್ದ ಓಮ್ನಿ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓಮ್ನಿಯಲ್ಲಿದ್ದ ಕೆ.ಪಿ.ಸಿ ನಿವೃತ್ತ ಉದ್ಯೋಗಿ ದೆವಯ್ಯ (65) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಓಮ್ನಿಯಲ್ಲಿದ್ದ ವಡನ್ ಬೈಲ್ ಪದ್ಮಾವತಿ ದೇವಸ್ಥಾನದ ಗುರುಗಳಾದ ವೀರರಾಜ್ ಜೈನ್ (71) ಎಂಬುವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅಪಘಾತದ ಸ್ಥಳಕ್ಕೆ ಜೋಗ ಪಿಎಸ್ಐ ನಿರ್ಮಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.