ಒಳ್ಳೆಯ ಆಡಳಿತ ಬಿಜೆಪಿಯ ಹಣೆಯಲ್ಲೇ ಬರೆದಿಲ್ಲ: ಕಾಂಗ್ರೆಸ್

Update: 2022-09-23 05:53 GMT

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 'ಒಳ್ಳೆಯ ಆಡಳಿತ ಬಿಜೆಪಿಯ ಹಣೆಯಲ್ಲೇ ಬರೆದಿಲ್ಲ, ಅವರು ಏನಿದ್ದರೂ ಒಳ್ಳೆಯ ವ್ಯಾಪಾರಿಗಳು' ಎಂದು ಆಕ್ರೋಶ ವ್ಯಕ್ತಪಡಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, " ಸರ್ಕಾರಿ ಹುದ್ದೆಗಳನ್ನು ಸಂತೆಯಲ್ಲಿ ತರಕಾರಿ ಮಾರಿದಂತೆ ಮಾರಾಟ ಮಾಡಿದ ಕೀರ್ತಿ #40PercentSarkara ಕ್ಕೆ ಸಲ್ಲಬೇಕು'' ಎಂದು ಟೀಕಿಸಿದೆ.

''ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು 30 ಲಕ್ಷಕ್ಕೆ ಮಾರಿದ ಅಕ್ರಮದ ತನಿಖೆ ಮಾಡಲು #PayCM ಅವರಿಗೆ ಆಸಕ್ತಿ ಇಲ್ಲವೇಕೆ? #PayCM ಎಂದಾಕ್ಷಣ ಗಾಬರಿಯಿಂದ ಹೆಗಲು ಮುಟ್ಟಿಕೊಳ್ಳುವುದೇಕೆ? ಕಳ್ಳನ ಮನಸು ಹುಳ್ಳುಳ್ಳಗೆ' ಎಂಬ ಮಾತು ನಿಜವೇ?  PSI ಹುದ್ದೆಗಳು 80 ಲಕ್ಷಕ್ಕೆ ಮಾರಾಟವಾಗಿದ್ದರೂ ಹಗರಣ ನಿರಾಕರಿಸಿದ್ರಿ, ಬಸವರಾಜ ದಡೇಸಗೂರ ಹಾಗೂ ಅಶ್ವಥ್ ನಾರಾಯಣ್ ಅವರ ವಿಚಾರಣೆ ನಡೆಸಲೇ ಇಲ್ಲ. ಪೇ ಮೆಂಟ್ ಪಾಲು ನಿಮಗೂ ತಲುಪಿದೆಯೇ?'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News