ಸಿಎಂ ತವರು ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳೇ ಇಲ್ಲ, ಹಣ ಬಿಡುಗಡೆಯೂ ಆಗಿಲ್ಲ: ಕಾಂಗ್ರೆಸ್ ಆರೋಪ

Update: 2022-09-25 08:47 GMT

ಬೆಂಗಳೂರು: ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 'ಕನ್ನಡ ನಾಡು, ನುಡಿಯ ಹಿತಾಸಕ್ತಿ ಎಂದರೆ ಬಿಜೆಪಿಗೆ ಸದಾ ಅಸಡ್ಡೆ' ಎಂದು ಹೇಳಿದೆ. 
 
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕನ್ನಡವನ್ನು ಶತ್ರುಪಕ್ಷದಂತೆ ಕಾಣುವ #40PercentSarkara ಪಿತೃಪಕ್ಷದ ನೆಪ ಹೇಳುತ್ತಿದೆ! ಸ್ವತಃ ಸಿಎಂ ತವರು ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳೇ ಇಲ್ಲ. ಹಣ ಬಿಡುಗಡೆಯೂ ಆಗಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

''ಇದರಲ್ಲೂ 40% ಕಮಿಷನ್ ಚೌಕಾಸಿ ನಡೆಯುತ್ತಿದೆಯೇ?'' ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದೆ. 

ಇದನ್ನೂ ಓದಿ:  ಸರಕಾರದ ಕ್ರಮಕ್ಕಾಗಿ ಕಾಯುತ್ತಿರುವ ಕನ್ನಡ ನಾಡಧ್ವಜ

'ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಕಂಪ್ಯೂಟರ್ ಸಾಕ್ಷರತಾ ಕೇಂದ್ರ ಸ್ಥಾಪಿಸುತ್ತೇವೆ' ಎಂದಿದ್ದ ಬಿಜೆಪಿ ಈಗ ತಾವು ಸ್ಥಾಪಿಸಿದ ಕಂಪ್ಯೂಟರ್ ಕೇಂದ್ರಗಳನ್ನು ತೋರಿಸಲು ಸಾಧ್ಯವೇ? ಬಿಜೆಪಿ ಹಳ್ಳಿ ಹಳ್ಳಿಗೂ ತಲುಪಿಸಿದ್ದು ಭ್ರಷ್ಟಾಚಾರವನ್ನು ಮಾತ್ರ! ನಿಮ್ಮ ಪ್ರಣಾಳಿಕೆ ಅಂದ್ರೆ ಸುಳ್ಳಿನ ಗಂಟು ಅಲ್ಲವೇ?' ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News