ನಳಿನ್ ಕುಮಾರ್ ಕಟೀಲ್‌ಗೆ ಮಂಪರು ಪರೀಕ್ಷೆ ಮಾಡಿಸಬೇಕು: ಬಿ.ಕೆ. ಹರಿಪ್ರಸಾದ್

Update: 2022-09-29 18:25 GMT

ಮೈಸೂರು,ಸೆ.29: ಮೊದಲು ಕಾಂಗ್ರೆಸ್ ಪಕ್ಷವನ್ನೇ ಬ್ಯಾನ್ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. 

ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ  ಹರಿಪ್ರಸಾದ್,  ' ನಳಿನ್ ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ, ಮಂಗಳೂರಿನಲ್ಲಿ ಪಿಎಫ್‌ಐ - ಎಸ್‌ಡಿಪಿಐ ಜೊತೆ ಯಾರಿಗೆ ಸಂಬಂಧವಿದೆ ಎನ್ನುವುದು ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ. 

'ಗುಜರಾತ್ ಚುನಾವಣೆ ವೇಳೆ ಮೋದಿಗೆ ಜೀವ ಬೆದರಿಕೆ ವಿಚಾರ ಹೊರ ಬರುತ್ತದೆ.  ಇನ್ನು ಲೂಟಿ ರವಿಯ ಟೀಕೆಗಳಿಗೂ ನಾವು ಉತ್ತರಿಸುವ ಅಗತ್ಯವಿಲ್ಲ' ಎಂದು ಬಿಕೆ ಹರಿಪ್ರಸಾದ್ ಟಾಂಗ್ ನೀಡಿದರು.

ಇದನ್ನೂ ಓದಿ:  'ಕೋಮುದ್ವೇಷಕ್ಕೆ ಬಲಿಯಾದ' ಎಂದು ಸಂಘಪರಿವಾರ ಕಾರ್ಯಕರ್ತರಿಂದಲೇ ಹತ್ಯೆಗೀಡಾದ ಪ್ರವೀಣ್ ಪೂಜಾರಿ ಫೋಟೊ ಹಾಕಿದ ಬಿಜೆಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News