KSRTC ದಸರಾ ಪ್ಯಾಕೇಜ್: ಪ್ರಯಾಣ ಅನುಭವದ ವಿಡಿಯೋ ಹಂಚಿಕೊಂಡು ಬಹುಮಾನ ಗೆಲ್ಲಲು ಅವಕಾಶ

Update: 2022-09-30 15:48 GMT

ಬೆಂಗಳೂರು, ಸೆ.30: ದಸರಾ ಹಬ್ಬದ ಪ್ರಯುಕ್ತ ಕೆಎಸ್ಸಾರ್ಟಿಸಿ (KSRTC) ವತಿಯಿಂದ ವಿಶೇಷ ಪ್ಯಾಕೇಜ್‍ಗಳನ್ನು ಮಂಜೂರು ಮಾಡಲಾಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಂಡು ಬಹುಮಾನ ಗೆಲ್ಲಬಹುದು ಎಂದು ತಿಳಿಸಿದೆ.

ಅ.1ರಿಂದ ಮೈಸೂರು ದಸರಾ ದರ್ಶನದಡಿ ಮೈಸೂರಿನಿಂದ ಜಲದರ್ಶಿನಿ, ಗಿರಿದರ್ಶಿನಿ, ದೇವದರ್ಶಿನಿ, ಮೈಸೂರು ದೀಪಾಲಂಕಾರ ದರ್ಶನ, ಮೈಸೂರ ದರ್ಶಿನಿ, ಮಡಿಕೇರಿ ಪ್ಯಾಕೇಜ್ ಮತ್ತು ಊಟಿ ಪ್ಯಾಕೇಜ್ ಅನ್ನು, ಮಂಗಳೂರು ದಸರಾ ದರ್ಶನ ಹಾಗೂ ಮಂಗಳೂರಿನ ಸುತ್ತಮುತ್ತಲಿನ ಪ್ರಮುಖ ದೇವಸ್ಥಾನಗಳ ದರ್ಶನ ಪ್ಯಾಕೇಜ್ ಅನ್ನು ಕೆಎಸ್ಸಾರ್ಟಿಸಿ ಜಾರಿ ಮಾಡಿದೆ. ಈ ಪ್ಯಾಕೇಜ್ ಪ್ರವಾಸದಲ್ಲಿನ ಅನುಭವವನ್ನು ವಿಡಿಯೋ ಮಾಡಿ ಪ್ರಯಾಣಿಕರು ಹಂಚಿಕೊಳ್ಳಲು ತಿಳಿಸಿದೆ. 

ಫೇಸ್‍ಬುಕ್ ಮತ್ತು ಟ್ವಿಟರ್ ಎರಡರಲ್ಲೂ #DasarawithKSRTC ಎಂಬ ಹ್ಯಾಷ್‍ಟ್ಯಾಗ್‍ಗಳ ಜೊತೆ ವಿಡಿಯೋ ಪೋಸ್ಟ್ ಮಾಡಬೇಕು.

ಅತ್ಯಾಧಿಕ ಲೈಕ್ಸ್ ಪಡೆದ ಮತ್ತು ಸಕಾರತ್ಮಕ ಅಭಿವ್ಯಕ್ತಿಯ ವಿಡಿಯೋವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಪ್ರಯಾಣದ ಸಂದರ್ಭದಲ್ಲಿನ ವಿಡಿಯೋ ಹಂಚಿಕೊಳ್ಳಲು ಅ.10 ಕೊನೆಯ ದಿನವಾಗಿದೆ. ಮೊದಲ ಬಹುಮಾನವಾಗಿ 5ಸಾವಿರ ರೂ., ದ್ವಿತೀಯ 3ಸಾವಿರ ರೂ. ಮತ್ತು ತೃತೀಯ ಬಹುಮಾನ 2 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಕೆಎಸಾರ್ಟಿಸಿ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: ಐಸಿಸಿ ಕಿವುಡರ ಟಿ20 ಟ್ರೋಫಿ: ಭಾರತ ತಂಡದಲ್ಲಿ ಕುಂದಾಪುರದ ಪೃಥ್ವಿರಾಜ್ ಶೆಟ್ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News