ದಾವಣಗೆರೆ: ರೀಲ್ಸ್ ಮಾಡಲು ಚೆಕ್ ಡ್ಯಾಂ ಬಳಿ ಹೋದ ಇಬ್ಬರು ಯುವಕರು ನೀರು ಪಾಲು

Update: 2022-10-01 10:19 GMT
 ನೀರು ಪಾಲಾದ ಯುವಕರು

ದಾವಣಗೆರೆ:  ಜಿಲ್ಲೆಯ ಹರಗನಹಳ್ಳಿ  ಚೆಕ್ ಡ್ಯಾಂ ಬಳಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿದ್ದರೆನ್ನಲಾದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ನಡೆದಿದೆ. 

ಹರಿಹರ ಆಶ್ರಯ ಬಡಾವಣೆಯ ಪವನ್ (25) ಹಾಗೂ  ಪ್ರಕಾಶ್ (24) ನೀರು ಪಾಲಾಗಿರುವ ಯುವಕರು ಎಂದು ತಿಳಿದು ಬಂದಿದೆ. 

ಹರಿಹರ ಚೆಕ್ ಡ್ಯಾಂ ಬಳಿ ರೀಲ್ಸ್ ಮಾಡಲು ಹೋಗಿದ್ದ  ಪ್ರಕಾಶ್ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಮುಳುಗುತ್ತಿದ್ದ ಸ್ನೇಹಿತ ಪ್ರಕಾಶ್ ನನ್ನು ರಕ್ಷಿಸಲು ಹೋದ ಪವನ್ ಕೂಡ ಮುಳುಗಿದ್ದಾನೆ ಎಂದು ಹೇಳಲಾಗಿದೆ.  

ಇನ್ನು ಹರಿಹರದ ರಾಘವೇಂದ್ರ ಮಠದ ಬಳಿ ಓರ್ವನ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News