ಜಂಬೂ ಸವಾರಿ ಪಾಸ್ ನಲ್ಲಿ ಗೊಂದಲ: ದಸರಾ ಪಾಸ್ ವಾಪಸ್ ನೀಡಿದ ಶಾಸಕ ಹರ್ಷವರ್ಧನ್

Update: 2022-10-05 03:12 GMT

ಮೈಸೂರು: ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಪಾಸ್ ನಲ್ಲಿ ಗೊಂದಲ ಏರ್ಪಟ್ಟ ಕಾರಣ ಶಾಸಕ ಹರ್ಷವರ್ಧನ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಮಗೆ ನೀಡಿದ್ದ ದಸರಾ ಪಾಸ್ ಗಳನ್ನು ವಾಪಸ್ ನೀಡಿದ್ದಾರೆ.

ದಸರಾ ಪಾಸ್ ಗಳೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಹಂಚಿಕೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಜಿಲ್ಲೆಯನ್ನು ಪ್ರತಿನಿಧಿಸುವ ನಮಗೆ ಕೇವಲ 75 ಪಾಸ್ ನೀಡಲಾಗಿದೆ. ಇವರ ಯಶವಂತಪುರ ಕ್ಷೇತ್ರಕ್ಕೆ ಸಾವಿರಾರು ಗಟ್ಟಲೆ ಪಾಸ್ ಹಂಚಲಾಗಿದೆ. ಹಾಗಿದ್ದ ಮೇಲೆ ನಮ್ಮ ಕ್ಷೇತ್ರದ ಜನರಿಗೆ ಏನು ಉತ್ತರ ಕೊಡುವುದು ಎಂದು ಪ್ರಶ್ನಿಸಿದ್ದಾರೆ. ಇದರಿಂದ ಬೇಸತ್ತ ಶಾಸಕ ಹರ್ಷವರ್ಧನ್ ಮಂಗಳವಾರ ತಡರಾತ್ರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪಾಸ್ ಅನ್ನು ಹಿಂದುರುಗಿಸಿ ನೀವೆ ಇಟ್ಟುಕೊಳ್ಳಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News