ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸವಿದೆ: ಮಲ್ಲಿಕಾರ್ಜುನ ಖರ್ಗೆ

Update: 2022-10-05 14:38 GMT

ಕಲಬುರಗಿ: 'ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ವಿರ್ಶವಾಸವಿಟ್ಟಿದೆ. ಪ್ರತಿಯೊಬ್ಬರ ಸಾಮರ್ಥ್ಯ, ಚಿಂತನೆ ತೆಗೆದುಕೊಂಡು ಪಕ್ಷ ಬಲಪಡಿಸುತ್ತೇವೆ. ಸಂಘಟನೆಯಲ್ಲಿ ಎಲ್ಲರ ವಿಚಾರಗಳನ್ನು ತೆಗೆದುಕೊಂಡು ಮುಂದೆ ಹೋಗಬೇಕಾಗುತ್ತದೆ'' ಎಂದು ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಸೇರಿದಂತೆ ಎಲ್ಲರ ಒತ್ತಾಯದ ಮೇರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ನನ್ನ ಸ್ವಇಚ್ಛೆಯಿಂದ ನಿಂತಿಲ್ಲ. ಹಿರಿಯ ನಾಯಕರು, ಹಿತೈಷಿಗಳು, ಸಿಎಲ್‍ಪಿ ನಾಯಕ, ಡೆಲಿಗೇಟ್ಸ್, ಶೇ.100ರಷ್ಟು ಜನ ಬಂದು ನಾಮಪತ್ರ ಸಲ್ಲಿಸುವ ವೇಲೆ ಭಾಗಿಯಾಗಿದ್ದರು. ಇಂತಹ ಸಮಯದಲ್ಲಿ ನಿಲ್ಲುವುದಿಲ್ಲ ಎಂದರೆ ಪಕ್ಷಕ್ಕೆ ದ್ರೋಹ ಬಗೆದಂತೆ. ಇದನ್ನು ಮಾಡಿ ಅಂದ ಮೇಲೆ ಕಾರ್ಯಕರ್ತನಾಗಿ ನಾನು ನಿಂತಿದ್ದೇನೆ. ಡೆಲಿಗೆಟ್ಸ್ ಬೆಂಬಲ ಸಿಗುತ್ತದೆ ಎಂಬ ನಂಬಿಕೆ ನನಗಿದೆ'' ಎಂದು ಹೇಳಿದರು. 

ರಾಜ್ಯದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಸಂಸತ್‍ಗೆ ತೆರಳಿ 13 ವರ್ಷಆಯ್ತು. ಈಗ ಸಿಎಂ ಬಗ್ಗೆ ಮಾತನಾಡುತ್ತೀರಾ?ಈಗ ವಿಧಾನಸಭೆಚುನವಾಣೆಯಾ? ಸಿಎಂ ಸ್ಥಾನ ಎಷ್ಟು ಬಾರಿ ಕಳೆದುಕೊಂಡೆ?ಎಂಬುವುದುಎಲ್ಲರಿಗೂ ತಿಳಿದಿದೆ.ನನಗೆ ಆ ಬಗ್ಗೆ ಚಿಂತೆಇಲ್ಲ. ನನಗೆ ಸಂಘಟನೆ ಮುಖ್ಯ.ನನ್ನ ತತ್ವಗಳನ್ನು ಅನುಷ್ಠಾನಕ್ಕೆ ತರಬೇಕಾದರೆ ನನಗೆ ಬಲ ಬೇಕು. ಬಲ ಬೇಕಾದರೆ ಪಕ್ಷಬೇಕು. ಪಕ್ಷ ಬೇಕಾದರೆ ಜನ ಬೇಕು. ಜನಇದ್ದರೇ ನಮಗೆ ಶಕ್ತಿ ಸಿಗುತ್ತದೆ ಎಂದು ತಿಳಿಸಿದರು.

''ದೇಶದ ಹಿತದೃಷ್ಟಿಯಿಂದ ಒಗ್ಗಟ್ಟು ಆಗದೆ ಹೋದರೆ ಬಹಳ ದೊಡ್ಡತೊಂದರೆ. ದೇಶ, ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಇದೀಗ ಬಹಳ ಸಂಕಷ್ಟವಿದೆ.ಈ ದೃಷ್ಟಿಯಿಂದ ನಾನು ಚುನಾವಣೆಗೆ ಸ್ಪರ್ಧಿಸಿರುವೆ. ಚುನಾವಣೆ ಬಳಿಕ ಯಾವುದಕ್ಕೆ ಪ್ರಾಶಸ್ತ್ಯಕೊಡಬೇಕು ಅದಕ್ಕೆ ನೀಡುತ್ತೇವೆ'' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News