ಬಿಎಸ್ವೈ ಇಷ್ಟು ಕೀಳುಮಟ್ಟದ ಹೇಳಿಕೆ ಕೊಡ್ತಾರೆಂದು ಅಂದ್ಕೊಂಡಿರಲಿಲ್ಲ: ಸಿದ್ದರಾಮಯ್ಯ ಆಕ್ರೋಶ

Update: 2022-10-12 04:59 GMT

ಚಿತ್ರದುರ್ಗ: 'ಬಿಎಸ್​ವೈಗೆ ವಯಸ್ಸಾಗಿದೆ, ಅರಳು ಮರಳಾಗಿದೆ ಅನಿಸುತ್ತಿದೆ. ಇಷ್ಟು ಕೀಳುಮಟ್ಟದ ಹೇಳಿಕೆ ಕೊಡ್ತಾರೆಂದು ಅಂದ್ಕೊಂಡಿರಲಿಲ್ಲ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ, ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,  'ರಾಹುಲ್ ಗಾಂಧಿ ಒಬ್ಬ ಬಚ್ಚಾ' ಎಂಬ ಹೇಳಿಕೆ ನೀಡಿದ್ದರು.

ಮೋದಿ ಪಾದದ ಧೂಳಿಗೂ ಸಿದ್ದರಾಮಯ್ಯ ಸಮನಲ್ಲ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ''ನೆಹರೂ ಪಾದಕ್ಕೂ ಮೋದಿ ಸಮಾನರಲ್ಲ ಎಂಬುದಾಗಿ ನಾನು ಹೇಳಲಿಕ್ಕೆ ಆಗುತ್ತದಾ? ಮೋದಿ ಅವರು ದೇಶದ ಪ್ರಧಾನಿ. ಯಡಿಯೂರಪ್ಪ ಅವರಷ್ಟು ಕೀಳು ಅಭಿರುಚಿಯ ಹೇಳಿಕೆ ನೀಡುವುದಿಲ್ಲ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅರುಳು ಮರುಳು ಇರಬಹುದು'' ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಮಂತ್ರಾಲಯ ಸೇತುವೆಗೆ ಬಿಎಸ್‌ವೈ ಹೆಸರು: ಸಿಎಂ ಬೊಮ್ಮಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News