ಮೀಸಲಾತಿ ಪದ್ಧತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ, ಆರೆಸ್ಸೆಸ್ ಹಿಡನ್ ಅಜೆಂಡಾ: ಯು.ಟಿ.ಖಾದರ್

Update: 2022-10-12 05:58 GMT

ಬೆಂಗಳೂರು: 'ಮೀಸಲಾತಿ ಪದ್ಧತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ ಹಾಗೂ ಆರೆಸ್ಸೆಸ್ ನ ಹಿಡನ್ ಅಜೆಂಡಾ' ಎಂದು ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, '2B ಯಲ್ಲಿರುವ ಅಲ್ಪಸಂಖ್ಯಾತ ಮೀಸಲಾತಿ ರದ್ದತಿ ಬಗ್ಗೆ ಬಿಜೆಪಿ ಶಾಸಕ ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯು ಬಿಬಿಎಂಪಿ ಹಾಗೂ ಸ್ಥಳಿಯ ಸಂಸ್ಥೆಗಳ ಚುನಾವಣಾ ಮೀಸಲಾತಿಯನ್ನ ಗೊಂದಲಮಯಗೊಳಿಸಿ ವ್ಯವಸ್ಥಿತವಾಗಿ ರದ್ದುಪಡಿಸಿದಂತೆ, ಈ ಬಾರಿಯೂ 2A,2B ಎಂದು ಇನ್ನಷ್ಟು ಕಗ್ಗಂಟುಗೊಳಿಸಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಪರಿಶಿಷ್ಟರು ಜಾತಿ ಮತ್ತು ಪಂಗಡದವರು ಸೇರಿದಂತೆ ಎಲ್ಲಾ ವರ್ಗಗಳಿಗಿಗೆ ಮೀಸಲಾತಿ ಪದ್ದತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ ಹಾಗೂ ಆರೆಸ್ಸೆಸ್ ನ ಹಿಡನ್ ಅಜೆಂಡಾ' ಎಂದು ಆರೋಪಿಸಿದ್ದಾರೆ.

'ಮೀಸಲಾತಿ‌ ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದು ಬಿಜೆಪಿ ಆರೆಸ್ಸೆಸ್ ನ ರಾಮಾ ಜೋಯಿಸ್ ಅವರು ಎಂಬುದು ಯಾರು ಮರೆಯಬಾರದು' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News