ಭಟ್ಕಳ: ಬಟ್ಟೆ ಬದಲಿಸಿ ಬರುವುದಾಗಿ ಹೇಳಿ ಕಳವು ಪ್ರಕರಣದ ಆರೋಪಿ ಪರಾರಿ

Update: 2022-10-13 09:01 GMT

ಭಟ್ಕಳ: ಬಟ್ಟೆ ಬದಲಿಸಿ ಬರುವುದಾಗಿ ಹೇಳಿ ಕಳವು ಪ್ರಕರಣದ ಆರೋಪಿಯೋರ್ವ ಪರಾರಿಯಾದ ಘಟನೆ ಭಟ್ಕಳದಲ್ಲಿ ನಡೆದಿದೆ.

ಮಂಜು ಕೊರಗ ಪರಾರಿಯಾದ ಸೈಕಲ್, ಬೈಕ್ ಕಳವು ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಭಟ್ಕಳ ನಗರ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮೋಟಾರ್‌ ಬೈಕ್‌ ಮತ್ತು ಸೈಕಲ್‌ ಕಳ್ಳತನ ನಡೆಯುತ್ತಿದ್ದು ಈ ಸಂಬಂಧ ವ್ಯಕ್ತಿಯೋರ್ವರು ಕಳೆದುಕೊಂಡ ಸೈಕಲ್‌ ಅವಷೇಶಗಳು ಕೊಟೇಶ್ವರದ ಮಂಜು ಕೊರಗನ ಮನೆಯಲ್ಲಿರುವುದನ್ನು ಗಮನಿಸಿ, ಅವರು  ಶಹರ ಪೊಲೀಸ್  ಠಾಣೆಗೆ ದೂರು ನೀಡಿದ್ದರು. ನಿನ್ನೆ ರಾತ್ರಿ ಪೊಲೀಸರು ದಾಳಿ ಮಾಡಿ 25 ಸೈಕಲ್, 3 ಬೈಕ್ ಜಪ್ತಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಭಟ್ಕಳ ಪಟ್ಟಣದ ಕೋಟೇಶ್ವರ ರಸ್ತೆಯ ಮಂಜು ಕೊರಗ ಎಂಬ ಆರೋಪಿಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈತನನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ ಪೊಲೀಸರೊಂದಿಗೆ ಬಟ್ಟೆ ಬದಲಿಸಿ ಬರುವುದಾಗಿ ಹೇಳಿ ಮಂಜು ಕೊರಗ ಮನೆಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳವು ಮಾಡಿದ ಸೈಕಲ್,ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಪಿ.ಎಸ್‌.ಐ  ಸುಮಾ ಬಿ., ಎಚ್‌ ಬಿ ಕುಡಗುಂಟಿ, ಯಲ್ಲಪ್ಪ ಮಾದರ್‌ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News