ನಿರ್ಮಾಣ ಹಂತದ ವಸತಿ ನಿಲಯದ ಕಟ್ಟಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

Update: 2022-10-14 16:36 GMT

ಯಾದಗಿರಿ: ಸುರಪುರ ನಗರದ ಪದವಿ ಕಾಲೇಜ್ನ (ಪರಿಶಿಷ್ಟ ಜಾತಿ) ವಸತಿ ನಿಲಯದ ವಿದ್ಯಾರ್ಥಿಯೊಬ್ಬ ನಿರ್ಮಾಣ ಹಂತದ ವಸತಿ ನಿಲಯದ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಶಹಾಪುರ ತಾಲೂಕಿನ ಶೆಟ್ಟಿಗೆರಾ ಗ್ರಾಮದ ಭೀಮಾಶಂಕರ್  ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. 

ಭೀಮಾಶಂಕರ್ ನಗರದ ಸರಕಾರಿ ಪದವಿ ಪಮಾವಿದ್ಯಾಲಯದಲ್ಲಿ ಬಿ.ಎ ದ್ವೀತಿಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಗುರುವಾರ ರಾತ್ರಿ 9 ಗಂಟೆಯ ವೇಳೆಗೆ ಊಟ ಮಾಡಿ ಹೊರಗಡೆ ಹೋದವನು ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿಯಲ್ಲಿ ನಿರ್ಮಾಣ ಹಂತದಲ್ಲಿನ ವಸತಿ ನಿಲಯದ ಕಟ್ಟಡದಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಕಟ್ಟಡ ಕಾರ್ಮಿಕರು ಹೋಗಿ ನೋಡಿದಾಗ ವಿಷಯ ತಿಳಿದಿದ್ದು,  ಸ್ಥಳಕ್ಕೆ ಸುರಪುರ ಠಾಣೆಯ ಪಿ.ಐ ಸುನೀಲಕುಮಾರ್ ಮೂಲಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದುದ್ದಾರೆ.

ಯುವಕನ ಸಾವಿಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ, ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News