ಮಡಿಕೇರಿ: ಬಸವೇಶ್ವರ ದೇವಾಲಯದಲ್ಲಿ ಕಾಡಾನೆ ದಾಂಧಲೆ
Update: 2022-10-15 18:00 IST
ಮಡಿಕೇರಿ ಅ.15 : ಅಭ್ಯತ್ ಮಂಗಲದ ಶ್ರೀ ಬವೇಶ್ವರ ದೇವಾಲಯದಲ್ಲಿ ಕಾಡಾನೆ ದಾಂಧಲೆ ನಡೆಸಿದೆ. ದೇವಾಲಯ ಪ್ರವೇಶಿಸಿರುವ ಆನೆ ಪೌಳಿ, ದೀಪ ಮತ್ತಿತರ ವಸ್ತುಗಳನ್ನು ಜಖಂಗೊಳಿಸಿದೆ.
ಕಾಡಾನೆ ದೇವಾಲಯದ ಮೇಲೆ ದಾಳಿ ಮಾಡಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿರುವುದಲ್ಲದೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕೂಡ ಇದೇ ಅವಧಿಯಲ್ಲಿ ಕಾಡಾನೆ ಬಸವೇಶ್ವರ ದೇವಾಲಯದ ಆವರಣದಲ್ಲಿ ದಾಂಧಲೆ ನಡೆಸಿತ್ತೆನ್ನಲಾಗಿದೆ.