ಬಸವಪ್ರಭು ಶ್ರೀಗೆ ಮುರುಘಾಮಠದ ಉಸ್ತುವಾರಿ
Update: 2022-10-16 14:09 GMT
ಚಿತ್ರದುರ್ಗ, ಅ.16: ಚಿತ್ರದುರ್ಗದ ಮುರುಘಾಮಠದ ಪರಂಪರೆಯಂತೆ ಪೂಜಾ ಕಾರ್ಯಕ್ರಮ ಹಾಗೂ ದೈನಂದಿನ ಚಟುವಟಿಕೆಯ ಉಸ್ತುವಾರಿಗೆ ಉಚ್ಚ ನ್ಯಾಯಾಲಯದ ಆದೇಶದಂತೆ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅವರನ್ನು ಮುರುಘಾ ಶ್ರೀ ನೇಮಕ ಮಾಡಿದ್ದಾರೆ.
ಕೋರ್ಟ್ ಆದೇಶ ಮತ್ತು ಮಠದ ಭಕ್ತರ ಆಶಯದಂತೆ ಮುರುಘಾಮಠದ ಪರಂಪರೆಯ ಕಾರ್ಯಕ್ರಮಗಳಾದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳು ಭಕ್ತರಿಗೆ ದರ್ಶನ ನೀಡುವ ವ್ಯವಸ್ಥೆಯಿದ್ದು, ಇನ್ನು ಮುಂದೆ ಪರಂಪರೆಯಂತೆ ನಡೆಯಲಿದೆ ಎಂದು ಮುರುಘಾಮಠದ ಪ್ರಕಟನೆ ತಿಳಿಸಿದೆ.
ಈ ನೇಮಕ ತಾತ್ಕಾಲಿಕ ಅವಧಿಗೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: ನಿವೃತ್ತ ನ್ಯಾಯಮೂರ್ತಿ ಎಸ್.ಬಿ.ವಸ್ತ್ರಮಠ್ ಗೆ ಪವರ್ ಆಫ್ ಅಟಾರ್ನಿ ನೀಡಿದ ಮುರುಘಾಶ್ರೀ