ಗೊಬ್ಬರ ಕೇಳಿದಕ್ಕೆ ಲಾಠಿ ಚಾರ್ಜ್ ಮಾಡಿಸಿದವರು, ರೈತ ಬಂಧು ಟಿವಿ ಚಾನೆಲ್ ಪ್ರಾರಂಭಿಸಲು ಸಾಧ್ಯವೇ?: ಪ್ರಿಯಾಂಕ್ ಖರ್ಗೆ
ಬೆಂಗಳೂರು: 'ಪೇ ಸಿಎಂ' ಬಳಿಕ 'ಸೇ ಸಿಎಂ' ಅಭಿಯಾನ ಆರಂಭಿಸಿರುವ ಕಾಂಗ್ರೆಸ್ , ರಾಜ್ಯ ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದಿದೆ.
ಗುರುವಾರ ಟ್ವೀಟ್ ಮಾಡಿರುವ ಶಾಸಕ ಹಾಗೂ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು, 'ರೈತರು ಗೊಬ್ಬರ ಕೇಳಿದಕ್ಕೆ ಲಾಠಿ ಚಾರ್ಜ್ ಮಾಡಿಸಿದವರು, ರೈತ ಬಂಧು ಟಿವಿ ಚಾನೆಲ್ ಪ್ರಾರಂಭಿಸಲು ಸಾಧ್ಯವೇ? ' ಎಂದು ಪ್ರಶ್ನೆ ಮಾಡಿದ್ದಾರೆ.
''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಮಿಷನ್ ದಾಹಕ್ಕೆ ರೈತರ ಬದುಕು ಬೀದಿಗೆ ಬಿದ್ದಿದೆ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಪ್ರವಾಹದಿಂದ ಬೆಳೆದ ಬೆಳೆ ನಾಶವಾಗಿದೆ, ಹವಾಮಾನದ ಮಾಹಿತಿ ಇಲ್ಲದೆ ಕಂಗಲಾಗಿದ್ದಾರೆ. ರೈತರಿಗೆ ಕೊಟ್ಟ ಮಾತು ನೆನಪಿದಿಯೇ?'' ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ''ರೈತರಿಗೆ ಮಾಹಿತಿ ನೀಡಲು ರೈತ ಬಂಧು ಟಿವಿ ಚಾನಲ್ ಪ್ರಾರಂಭಿಸುತ್ತೇವೆ ಎಂದು ಹೇಳಿದ್ದ ಬಿಜೆಪಿ ನಾಯಕರೇ ಎಲ್ಲಿ ಆ ಟಿವಿ ಚಾನೆಲ್? ನಿಮ್ಮ ಭ್ರಷ್ಟಾಚಾರದ ಕತೆಗಳು ಆ ಚಾನೆಲಿನಲ್ಲೂ ಪ್ರಸಾರವಾದರೆ ಕಷ್ಟ ಎಂದು ಭಯಪಟ್ಟಿರಾ!? ರೈತರಿಗೆ ಕನಿಷ್ಠ ಸಮರ್ಪಕವಾಗಿ ಗೊಬ್ಬರವನ್ನೇ ಕೊಡಲಾಗದವರು ಟಿವಿ ಚಾನಲ್ ಕೊಡುವರೇ!'' ಎಂದು ಟೀಕಿಸಿದೆ.
ರೈತರು ಗೊಬ್ಬರ ಕೇಳಿದಕ್ಕೆ ಲಾಟಿ ಚಾರ್ಜ್ ಮಾಡಿಸಿದವರು, ರೈತ ಬಂಧು ಟಿವಿ ಚಾನೆಲ್ ಪ್ರಾರಂಭಿಸಲು ಸಾಧ್ಯವೇ?@BSBommai ರವರೇ ನಿಮ್ಮ ಕಮಿಷನ್ ದಾಹಕ್ಕೆ ರೈತರ ಬದುಕು ಬೀದಿಗೆ ಬಿದ್ದಿದೆ, ಪ್ರವಾಹದಿಂದ ಬೆಳೆದ ಬೆಳೆ ನಾಶವಾಗಿದೆ, ಹವಾಮಾನದ ಮಾಹಿತಿ ಇಲ್ಲದೆ ಕಂಗಲಾಗಿದ್ದಾರೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 20, 2022
ರೈತರಿಗೆ ಕೊಟ್ಟ ಮಾತು ನೆನಪಿದಿಯೇ?#NimHatraIdyaUttara #SayCM pic.twitter.com/sjbkBxoX7t
ರೈತರಿಗೆ ಮಾಹಿತಿ ನೀಡಲು ರೈತ ಬಂಧು ಟಿವಿ ಚಾನಲ್ ಪ್ರಾರಂಭಿಸುತ್ತೇವೆ ಎಂದಿತ್ತು ಬಿಜೆಪಿ.
— Karnataka Congress (@INCKarnataka) October 20, 2022
ಎಲ್ಲಿ ಆ ಟಿವಿ ಚಾನೆಲ್ @BJP4Karnataka?
ನಿಮ್ಮ ಭ್ರಷ್ಟಾಚಾರದ ಕತೆಗಳು ಆ ಚಾನೆಲಿನಲ್ಲೂ ಪ್ರಸಾರವಾದರೆ ಕಷ್ಟ ಎಂದು ಭಯಪಟ್ಟಿರಾ!?
ರೈತರಿಗೆ ಕನಿಷ್ಠ ಸಮರ್ಪಕವಾಗಿ ಗೊಬ್ಬರವನ್ನೇ ಕೊಡಲಾಗದವರು ಟಿವಿ ಚಾನಲ್ ಕೊಡುವರೇ!#NimHatraIdyaUttara pic.twitter.com/b5cZjXI99a