ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ : MEIF ಅಧ್ಯಕ್ಷ ಮೂಸಬ್ಬ ಬ್ಯಾರಿಗೆ ಸನ್ಮಾನ

Update: 2022-10-22 15:06 GMT

ತುಮಕೂರು: ಖಾಸಗಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳ ರಾಜ್ಯಮಟ್ಟದ ಸಮ್ಮೇಳನ ತುಮಕೂರಿನಲ್ಲಿ ನಡೆಯಿತು. ಈ ಸಂದರ್ಭ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (MEIF) ಅಧ್ಯಕ್ಷರಾದ ಮೂಸಬ್ಬ ಬ್ಯಾರಿ ಅವರನ್ನು ಸನ್ಮಾನಿಸಲಾಯಿತು.

ʼಶಿಕ್ಷಣ ಕ್ಷೇತ್ರದ ಆವಿಷ್ಕಾರ ಮತ್ತು ಅಭಿವೃದ್ಧಿ ರಾಜ್ಯಮಟ್ಟದ ವಿಚಾರ ಸಂಕಿರಣʼವನ್ನು ಅಂತರಾಷ್ಟ್ರೀಯ ತರಬೇತುದಾರ ಮಹೇಶ್ ಮಸಾಲ್ ನಡೆಸಿಕೊಟ್ಟರು.

ತುಮಕೂರು ಜಿಲ್ಲಾ ಒಕ್ಕೂಟದ  ಗೌರವಾಧ್ಯಕ್ಷ  ಡಾ. ಜಯರಾಮ್ ರಾವ್ ಸಮ್ಮೇಳನ ಉದ್ಘಾಟಿಸಿದರು. ಅವರ್ ಸ್ಕೂಲ್ ಒಕ್ಕೂಟದ ಅಧ್ಯಕ್ಷ ಡಾ. ವಿಜಯ ಕುಮಾರ್, ಕಾರ್ಯದರ್ಶಿ ಪ್ರಭಾಕರ ಅರಸ್ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ MEIF ಉಪಾಧ್ಯಕ್ಷ  ಕೆ.ಎಂ ಮುಸ್ತಫಾ, ಕಾರ್ಯದರ್ಶಿ ನಝೀರ್, ಬುರೂಜ್ ಬಂಟ್ವಾಳ ಸಂಚಾಲಕ ಶೇಕ್ ರಹ್ಮತುಲ್ಲಾ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News