ಗುಜರಾತ್ ತೂಗು ಸೇತುವೆ ದುರಂತ ದೇವರು ಯಾರಿಗೆ ನೀಡಿದ ಸಂದೇಶ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ಮೋದಿಯವರ ಹಳೆಯ ಭಾಷಣದ ವಿಡಿಯೋ ವೈರಲ್

Update: 2022-10-31 15:07 GMT

ಬೆಂಗಳೂರು: ಗುಜರಾತ್ ತೂಗು ಸೇತುವೆ ಕುಸಿತ ದುರಂತದಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (Narendra Modi) ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತರಾಟೆಗೆ ತೆಗೆದುಕೊಂಡಿದ್ದಾರೆ. 

''ಮೋದಿ ಅವರ ಹಳೆಯ ಭಾಷಣದ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಚುನಾವಣಾ ಕಾಲದಲ್ಲಿ ಕೊಲ್ಕೊತ್ತಾದ ಮೇಲುಸೇತುವೆ ಕುಸಿದದ್ದು ಬಂಗಾಳಕ್ಕೆ ದೇವರು ಕಳಿಸಿದ್ದ ಸಂದೇಶ ಎನ್ನುವುದಾದರೆ, ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ?'' ಎಂದು ಪ್ರಶ್ನೆ ಮಾಡಿದ್ದಾರೆ. 

2016ರಲ್ಲಿ ಕೊಲ್ಕೊತ್ತಾದ ವಿವೇಕಾನಂದ ರಸ್ತೆ ಮೇಲುಸೇತುವೆ ಕುಸಿದಿದ್ದನ್ನು ಚುನಾವಣಾ ಪ್ರಚಾರದ ಬಹಿರಂಗ ಸಭೆಯೊಂದರಲ್ಲಿ  'ಮೇಲುಸೇತುವೆ ಕುಸಿದಿರುವುದು ಆಡಳಿತ ಬದಲಾವಣೆಗಾಗಿ ದೇವರು ಜನತೆಗೆ ನೀಡಿರುವ ಸಂದೇಶ' ಎಂದು  ಹೇಳಿಕೆ ನೀಡಿದ್ದರು. ಸದ್ಯ ಮೋದಿಯವರ ಈ ಭಾಷಣದ ವಿಡಿಯೋ ವೈರಲ್ ಆಗುತ್ತಿದೆ. 

Similar News