ಉಳ್ಳಾಲ: ಕನ್ನಡ ರಾಜ್ಯೋತ್ಸವ, ಸ್ನೇಹ ಸಮ್ಮಿಲನ
ಉಳ್ಳಾಲ, ನ. 1: ಕನ್ನಡ ನಮಗೆ ಬದುಕು ನೀಡಿದ ಭಾಷೆ, ನದಿಯ ರೀತಿಯಲ್ಲಿ ಬದುಕು ನಮ್ಮದಾಗಬೇಕು ಎಂದು ಮನೋಹರ್ ಪ್ರಸಾದ್ ಹೇಳಿದ್ದಾರೆ.
ಅವರು ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಬಬ್ಬುಕಟ್ಟೆ ಚಂದಪ್ಪ ಎಸ್ಟೇಟ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದೇಶದ ಕ್ಕೆ ಮೊದಲು ಬಂದಿದ್ದು ಪೋರ್ಚುಗೀಸರು. ಜಿಲ್ಲಾಧಿಕಾರಿ ಕಚೇರಿ ಅವರೇ ನಿರ್ಮಿಸಿದರು. ಮೊದಲ ಕಾರ್ಖಾನೆ , ರೊಝಾರಿಯೊ ಚರ್ಚ್ ಅವರೇ ನಿರ್ಮಿಸಿದ್ದರು. ಈ ವೇಳೆ ಉಳ್ಳಾಲದಲ್ಲಿ ಆಳ್ವಿಕೆ ಮಾಡಿದ್ದು ಅಬ್ಬಕ್ಕ ಎಂದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತಿ ಧರ್ಮ ವ್ಯತ್ಯಾಸ ಬಿಟ್ಟು ಅಬ್ಬಕ ಉತ್ಸವ ಆಚರಿಸಲಾಗುತ್ತಿದೆ. ಅಬ್ಬಕ್ಕಳ ಕ್ಷೌರ್ಯ ಎಲ್ಲೆಡೆ ತಲುಪಿಸಬೇಕು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಅಬ್ಬಕ್ಕಳ ಹೆಸರು ಇಡಬೇಕು. ತೊಕ್ಕೋಟ್ಟುವಿನಲ್ಲಿ ನನೆಗುದಿಗೆ ಬಿದ್ದಿರುವ ಅಬ್ಬಕ ಭವನ ಶೀಘ್ರ ರಚನೆ ಆಗಬೇಕು ಎಂದರು.
ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಮತ್ತು ಸುಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2022 ವಿಜೇತ ಶಶಿಕಾಂತ ಉಳ್ಳಾಲ ಅವರನ್ನು ಸನ್ಮಾನಿಸಲಾಯಿತು.
ದ.ಕ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ನಾಯಕ್ ಇಂದಾಜೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಯಾನಂದ ಕತ್ತಲ್ ಸಾರ್ ಅವರು, ಉಳ್ಳಾಲ ದಲ್ಲಿ ಕೇವಲ ಅಬ್ಬಕ್ಕ ವೃತ, ಕುದುರೆ ಇದ್ದರೆ ಸಾಕಾಗದು. ಅಬ್ಬಕ್ಕಳ ಹೆಸರಿನಲ್ಲಿ ಉಳ್ಳಾಲದಲ್ಲಿ ಸೌಧ ಆಗಬೇಕು ಅಬ್ಬಕ್ಕ ಉತ್ಸವ ಸಮಿತಿ ಸದಸ್ಯ ನಾಗಿ ಇರುತ್ತೇನೆ. 25 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣ ಆಗಬೇಕು. ಜೊತೆಗೆ ನಾನು ಬರುತ್ತೇನೆ. ನಾವು ತುಳುವರಾಗಿ ಸೋತಿದ್ದೇವೆ. ಇಲ್ಲದಿದ್ದರೆ ಅಬ್ಬಕ್ಕ ಭವನ ಯಾವಾಗಲೋ ಆಗಬೇಕಿತ್ತು ಎಂದರು.
ವೀರ ರಾಣಿ ಅಬ್ಬಕ್ಕ ಉತ್ಸವ ಗೌರವ ಅಧ್ಯಕ್ಷ ಸದಾನಂದ ಬಂಗೇರ, ಸೌತ್ ಕೆನರಾ ಫೊಟೋ ಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ತನುಂಜಯ ರಾವ್, ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ,ಪುಷ್ಪ ರಾಜ್ ಬಿ.ಎನ್ ದೇವಕಿ, ಭಗವಾನ್ ದಾಸ್ , ದಿನೇಶ್ ರೈ, ಮತ್ತಿತರರು ಉಪಸ್ಥಿತರಿದ್ದರು
ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ, ಸ್ವಾಗತಿಸಿದರು. ವಾಸುದೇವ ಕಾರ್ಯಕ್ರಮ ನಿರೂಪಿಸಿದರು. ಅನುಪಮ ಬಬ್ಬುಕಟ್ಟೆ ಸನ್ಮಾನಿತರ ಪರಿಚಯ ಮಾಡಿದರು