ತುಮಕೂರು: ಕೆಇಬಿ ಸೆಕ್ಯೂರಿಟಿ ಕಾಂಪೌಂಡ್‌ಗೆ ಕಾರು ಢಿಕ್ಕಿ; ಓರ್ವ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ

Update: 2022-11-10 03:17 GMT

ತುಮಕೂರು: ಹೊರಪೇಟೆಯಲ್ಲಿ ನೂತನವಾಗಿ ಕಟ್ಟಿರುವ ಕೆಇಬಿ ಸೆಕ್ಯೂರಿಟಿ ಕಾಂಪೌಂಡ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ತಡರಾತ್ರಿ ನಡೆದಿದೆ.

ದೇವೇಂದ್ರ (36) ಸ್ಥಳದಲ್ಲಿಯೇ ಮೃತಪಟ್ಟವರು ಎಂದು ತಿಳಿದುಬಂದಿದೆ.

ಕಾರು ಚಾಲಕ ಖಾಸಿಂ(25), ಮಂಜುನಾಥ (22) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಠಾಣೆ ಪೊಲೀಸರು ತಿಳಿಸಿದ್ದಾರೆ. 

Similar News