ಕಲಬುರಗಿ: ಹೊಂಡಕ್ಕೆ ಬಿದ್ದು ಬಾಲಕಿ ಸೇರಿ ಇಬ್ಬರು ಮೃತ್ಯು

Update: 2022-11-11 13:01 GMT

ಕಲಬುರಗಿ: ಬಟ್ಟೆ ಒಗೆಯಲು ಹೋಗಿದ್ದ ವೇಳೆ ಬಾಲಕಿ ಸೇರಿ ಇಬ್ಬರು ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದು, ಮೃತಪಟ್ಟಿರುವ ಘಟನೆ ಶಹಬಾದ್ ನಗರದ ರಾಮಘಡ ಆಶ್ರಯ ಕಾಲೋನಿಯ ಸಮೀಪದ ರೇಲ್ವೆ ಹಳಿಯ ಪಕ್ಕದಲ್ಲಿ ಶುಕ್ರವಾರದಂದು ವರದಿಯಾಗಿದೆ. 

ನಗರದ ರಾಮಘಡ ಆಶ್ರಯ ಕಾಲೋನಿಯ ನಿವಾಸಿಗಳಾದ ಮಾಣಿಕಮ್ಮ ಸಾಯಪ್ಪ ದಾಸ (20) ಮತ್ತು  ಕೀರ್ತಿಕಾ ರಾಜೇಶ (12) ಮೃತ ದುರ್ದೈವಿಗಳು.

ಮಾಣಿಕಮ್ಮ ಹಾಗೂ ಕೀರ್ತಿಕಾ ಬಟ್ಟೆ ಒಗೆಯಲು ಸಮೀಪದ ರೇಲ್ವೇ ಹಳಿಯ ಪಕ್ಕದಲ್ಲಿರುವ ಹೊಂಡಕ್ಕೆ ಹೋಗಿದ್ದರೆನ್ನಲಾಗಿದ್ದು,  ಬೆಳಿಗ್ಗೆ 10 ಗಂಟೆಗೆ ಹೋದವರು 12ಗಂಟೆಯಾದರೂ ಬರಲಿಲ್ಲ ಎಂದು ಕೀರ್ತಿಕಾ ಮಾವ ಮಂಜುನಾಥ ಬಟ್ಟೆ ಒಗೆಯುವ ಸ್ಥಳಕ್ಕೆ ಹೋಗಿ ನೋಡಿದಾಗ ಬಟ್ಟೆಗಳು ಮಾತ್ರ ಇದ್ದು, ಇಬ್ಬರು ಬಾಲಕಿಯರು ಕಾಣದೇ ಇರುವುದರಿಂದ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಈಜುಗಾರರ ನೆರವಿನಿಂದ ಮೃತ ದೇಹಗಳನ್ನು ಹೊರಕ್ಕೆ ತೆಗೆಸಿದ್ದಾರೆ ಎಂದು ತಿಳದು ಬಂದಿದೆ.

ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Similar News