‘ಸಂಸ್ಕೃತಿ ಸಿರಿ’ ಪ್ರಶಸ್ತಿಗೆ ನಾಗೇಶ್ ಹೆಗಡೆ ಸೇರಿ 8 ಮಂದಿ ಆಯ್ಕೆ: ನ.20ಕ್ಕೆ ಪ್ರಶಸ್ತಿ ಪ್ರದಾನ

Update: 2022-11-16 16:18 GMT

ಬೆಂಗಳೂರು, ನ. 16: ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ನೀಡುವ 2022ನೆ ಸಾಲಿನ ರಾಜ್ಯಮಟ್ಟದ ‘ಸಂಸ್ಕೃತಿ ಸಿರಿ’ ಪ್ರಶಸ್ತಿಗೆ ಅಂಕಣಕಾರ ನಾಗೇಶ್ ಹೆಗಡೆ, ಗಾಯಕಿ ಕಸ್ತೂರಿ ಶಂಕರ್, ಹೋರಾಟಗಾರ ರಾಮಣ್ಣ ಕೋಡಿಹೊಸಳ್ಳಿ, ಕಡಿದಾಳ್ ಪ್ರಕಾಶ್, ಬಿ.ಕೆ.ಶಿವರಾಂ, ಸುಧಾ ಬರಗೂರು ಹಾಗೂ ಡಾ. ಸುಪರ್ಣ ವೆಂಕಟೇಶ್ ಆಯ್ಕೆಯಾಗಿದ್ದಾರೆ. 

ಪ್ರಶಸ್ತಿಯು 25 ಸಾವಿರ ರೂ. ನಗದನ್ನು ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಉಪ ಲೋಕಯುಕ್ತ ಕೆ.ಎನ್.ಫಣೀಂದ್ರ, ಐ.ಎಂ.ವಿಠ್ಠಲಮೂರ್ತಿ ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Similar News