VIDEO-' ಬಿಜೆಪಿ ಜೇಬಿನಲ್ಲಿ ಇಟ್ಕೊಂಡಿದ್ಯಾ?': ಸಂಸದ ಶ್ರೀನಿವಾಸ್ ಪ್ರಸಾದ್ – ಮಾಜಿ MLC ರಮೇಶ್ ಮಧ್ಯೆ ವಾಕ್ಸಮರ

Update: 2022-11-16 17:23 GMT

ಟಿ.ನರಸೀಪುರ,ನ.16:  ಸಂಸದ ವಿ.ಶ್ರೀನಿವಾಸ್ ಪ್ರಸಾದ್  ಮತ್ತು ಬಿಜೆಪಿ ಮುಖಂಡ, ಮಾಜಿ ವಿಧಾನಪರಿಷತ್ ಸದಸ್ಯ ಸಿ.ರಮೇಶ್ ಮಧ್ಯೆ ವಾಕ್ಸಮರ ನಡೆದಿದ್ದು, ಈ ಕುರಿತ ವಡಿಯೋ ಒಂದು ವೈರಲ್ ಆಗಿದೆ. 

ಪಟ್ಟಣದ ತಲಕಾಡು ಮುಖ್ಯ ರಸ್ತೆಯ ಹಳೆ ಸಂತೆಮಾಳದ ಬಳಿ 4 ಕೋಟಿ 20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲೋಕೋಪಯೋಗಿ ಇಲಾಖೆ ಕಚೇರಿ  ಹಾಗೂ ಅತಿ ಗಣ್ಯರ ಅತಿಥಿ ಗೃಹವನ್ನು ಸ್ಥಳೀಯ ಶಾಸಕ ಎಂ.ಅಶ್ವಿನ್ ಕುಮಾರ್ ಜೊತೆಯಲ್ಲಿ ಉದ್ಘಾಟನೆ ಮಾಡಿದ ಬಳಿಕ ಅಧಿಕಾರಿಗಳ ಜೊತೆ ಚರ್ಚೆ ನಡೆಸುತಿದ್ದ ಸಂದರ್ಭದಲ್ಲಿ ಆಹ್ವಾನ ಪತ್ರಿಕೆ ಕೂಡುವಲ್ಲಿ ಲೋಪ ಮಾಡಿ ನನ್ನನ್ನ ಅವಮಾನಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸಿ.ರಮೇಶ್  ಹೇಳುತಿದ್ದಂತೆ ಸಿಟ್ಟಿಗೆದ್ದ ಶ್ರೀನಿವಾಸ್ ಪ್ರಸಾದ್ ''ನಿನ್ನದು ಇದ್ದುದ್ದೇ ರಾಮಾಯಣ ಆಚೆ ಹೋಗು'' ಎಂದು ಗದರಿ ಕಳುಹಿಸಿದ್ದಾರೆ. 

ಇದರಿಂದ ತಬ್ಬಿಬ್ಬಾದ ಮಾಜಿ ವಿಧಾನಪರಿಷತ್ ಸದಸ್ಯ ಸಿ.ರಮೇಶ್ ಹಾಗದರೆ ನಾನು ಏನು ಮಾತನಾಡಬಾರದ? ನಾನು ಬಿಜೆಪಿ ಕಾರ್ಯಕರ್ತನಲ್ಲವಾ? ನಾನು ನಿಮ್ಮ ಜೊತೆ ಮಾತನಾಡುತ್ತಿಲ್ಲ ಅಧಿಕಾರಿಯನ್ನು ಕೇಳುತ್ತಿದ್ದೆನೆ ಎಂದು ಸಮಜಾಯಿಷಿ ನೀಡಲು ಮುಂದಾದರು ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್  ಏಯ್ ಕಳುಹಿಸಿರಿ ಈತನನ್ನು ಆಚೆಗೆ. ಏನೊ ಬಾಯಿಗೆ ಬಂದಹಾಗೆ ಮಾತನಾಡುತ್ತಾನೆ. ಇದೆಲ್ಲಾ ನನ್ನ ಬಳಿ ಇಟ್ಟುಕೊಳ್ಳಬೇಡ, ಹೋಗು ಹೊರಗೆ ಎಂದು ಆಕ್ರೋಶ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

Full View

Similar News