ವೀರಪ್ಪನ್ ಸಿನೆಮಾ ವಿವಾದ | ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಗೆ ನ್ಯಾಯಾಲಯದಲ್ಲಿ ಹಿನ್ನಡೆ: ನಿರ್ದೇಶಕ ರಮೇಶ್

Update: 2022-11-22 16:33 GMT

ಬೆಂಗಳೂರು, ನ.22: ಎಎಂಆರ್ ಪಿಚ್ಚರ್ಸ್ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ‘ವೀರಪ್ಪನ್-ಹಂಗರ್ ಫಾರ್ ಕಿಲ್ಲಿಂಗ್’ ಸಿನೆಮಾಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ನಗರದ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ತಡೆಯಾಜ್ಞೆ ತಂದಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ, ನ.11ರಂದು ದಾವೆಯನ್ನು ವಜಗೊಳಿಸಿದೆ ಎಂದು ನಿರ್ದೇಶಕ ಎ.ಎಂ.ಆರ್. ರಮೇಶ್ ತಿಳಿಸಿದ್ದಾರೆ.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎಎಮ್‍ಆರ್ ಪಿಚ್ಚರ್ಸ್ ಸಂಸ್ಥೆಯಿಂದ ಈ ಹಿಂದೆ ‘ಅಟ್ಟಹಾಸ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವು ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿತ್ತು. ನ್ಯಾಯಾಲಯದ ಮಧ್ಗಯಸ್ಥಿಕೆಯಿಂದಾಗಿ ಮುತ್ತುಲಕ್ಷ್ಮೀ ಅವರಿಗೆ 25 ಲಕ್ಷ ರೂ.ಗಳನ್ನು, ಪಾವತಿ ಮಾಡಲಾಗಿದೆ. ಪ್ರಸ್ತುತ ನಮ್ಮ ಸಂಸ್ಥೆಯ ವತಿಯಿಂದ ಅಟ್ಟಹಾಸ ಚಿತ್ರದ ಮುಂದುವರೆದ ಭಾಗ ‘ವೀರಪ್ಪನ್’ ಸಿನೆಮಾವನ್ನು ಕನ್ನಡ ಭಾಷೆಯಲ್ಲಿ ನಿರ್ಮಿಸಲಾಗುತ್ತಿದೆ. ಆದರೆ ಚಿತ್ರಕ್ಕೆ ಬಿಡುಗಡೆಗೆ ಅಡ್ಡಿಯುಂಟು ಮಾಡಿತ್ತಿದ್ದಾರೆ ಎಂದು ಆರೋಪಿಸಿದರು. 

Similar News