ಕೆಎಸ್‌ಆರ್‌ಪಿ ಅಧಿಕಾರಿ ಆನಂದ್ ನಿಧನ

Update: 2022-11-25 10:23 GMT

ಮಡಿಕೇರಿನ,25: ಕೆಎಸ್‌ಆರ್‌ಪಿ ಅಧಿಕಾರಿ ಸೋಮವಾರಪೇಟೆ ಹಾನಗಲ್ ಶೆಟ್ಟಳ್ಳಿಯ ಹೆಚ್.ಎಂ.ಆನಂದ್(58) ನ.24ರಂದು ರಾತ್ರಿ ಹೃದಯಾಘಾತದಿಂದ ನಿಧನಹೊಂದಿದ್ದಾರೆ.
ಹಾಸನದಲ್ಲಿ 11 ನೇ ಬೆಟಾಲಿಯನ್ ನಲ್ಲಿ ಎಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು 1992ರಲ್ಲಿ ಕೆಎಸ್‌ಆರ್‌ಪಿ 
ಸೇವೆಗೆ ಸೇರ್ಪಡೆಗೊಂಡಿದ್ದರು.

ವೀರಪ್ಪನ್ ಕಾರ್ಯಾಚರಣೆಯ ಎಸ್‌ಟಿಎಫ್ ನಲ್ಲಿ 5 ವರ್ಷ ಸೇವೆ ಸಲ್ಲಿಸಿರುವ ಆನಂದ್, ಮೈಸೂರು, ಮಂಗಳೂರು ಹಾಗೂ ಹಾಸನದಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ. ಆನಂದ್ ಅವರು ಹಾನಗಲ್ ಶೆಟ್ಟಳ್ಳಿಯದಿ.ಹೆಚ್.ಈ.ಮಲ್ಲಯ್ಯ ಹಾಗೂ ಲೀಲಾವತಿ ದಂಪತಿಗಳ ಪುತ್ರ. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. 

Similar News