ಸಾಗರ: ಶರಾವತಿ ಹಿನ್ನೀರಿಗೆ ಜಾರಿದ ಬಸ್ಸು, ತಪ್ಪಿದ ಭಾರೀ ಅನಾಹುತ

Update: 2022-11-26 16:36 GMT

ಸಾಗರ : ತಾಲೂಕಿನ  ಹೊಳೆಬಾಗಿಲು ಸೇತುವೆ ಬಳಿ ಚಾಲಕನ‌ ನಿಯಂತ್ರಣ ತಪ್ಪಿದ ಬಸ್ ಒಂದು ಶರಾವತಿ ಹಿನ್ನೀರಿಗೆ ಇಳಿದಿರುವ ಘಟನೆ ವರದಿಯಾಗಿದೆ. 

ಸಾಗರದಿಂದ ಸಿಗಂದೂರು ಮಾರ್ಗವಾಗಿ ಕಟ್ಟಿನಕಾರಿಗೆ ತಲುಪುವ ಖಾಸಗಿ ಬಸ್ಸು, ಲಾಂಚ್ ಗಾಗಿ ಕಾಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಇಳಿದಿದೆ. ಬಸ್ ಹಿನ್ನೀರಿಗೆ ಇಳಿಯುತ್ತಿದ್ದಂತೆ ಬಸ್ ನಿಂದ ಹೊರಬಂದು ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದಾರೆನ್ನಲಾಗಿದ್ದು, ಇದರಿಂದ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದೆ. 

ಸಾಗರದಿಂದ ಪ್ರಯಾಣಿಕರು ಹಿನ್ನೀರಿನ ವಿವಿಧ ಭಾಗಗಳಿಗೆ ಸುಮಾರು 50 ರಿಂದ 60 ಜನ ಸ್ಥಳಿಯರು ಸೇರಿದಂತೆ ಸಿಗಂದೂರು ಪ್ರವಾಸಿಗರು ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲೇ ಇದ್ದ ಸೇತುವೆ ಕಾಮಗಾರಿಯ ಹಿಟಾಚಿಯ ಸಹಾಯದಿಂದ ಬಸ್ಸನ್ನು ಮೇಲಕ್ಕೆತ್ತಲಾಗಿದೆನ್ನಲಾಗಿದೆ.

ಸ್ಥಳಿಯರ ಆಕ್ರೋಶ: ಈಗಾಗಲೆ ಪ್ಲಾಟ್ ಪಾರಂ ನ ಅವ್ಯವಸ್ಥೆಯ ಬಗ್ಗೆ ಸಂಬಂದಿಸಿದ ಗುತ್ತಗೆದಾರರಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲವೆಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Full View

Similar News