ಈ ಬಾರಿ ದಲಿತರೇ ಸಿಎಂ ಆಗಬೇಕು, ಮಠಾಧೀಶರು ಹೇಳಿದವರಿಗೇ ಮತ ಹಾಕಿ: SC-ST ಸ್ವಾಮೀಜಿಗಳ ಸಭೆಯಲ್ಲಿ ನಿರ್ಣಯ

Update: 2022-11-29 05:43 GMT

ಬೆಳಗಾವಿ, ನ.29: SC-ST ಸಮುದಾಯದ ಸ್ವಾಮೀಜಿಗಳ ಸಭೆಯಲ್ಲಿ 'ರಾಜ್ಯದಲ್ಲಿ 2023ಕ್ಕೆ ದಲಿತರೇ ಸಿಎಂ ಆಗಬೇಕು' ಎಂಬ ನಿರ್ಣಯವನ್ನು ಕೈಗೊಂಡಿರುವುದಾಗಿ ವರದಿಯಾಗಿದೆ.

ನಿನ್ನೆ (ಸೋಮವಾರ) ಬೆಳಗಾವಿಯಲ್ಲಿ  SC-ST ಸಮುದಾಯದ ಸಭೆ ನಡೆಸಿರುವ ಸ್ವಾಮೀಜಿಗಳು,  ಸಭೆ ಬಳಿಕ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮತ್ತು  ರಮೇಶ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. 

''ಈ ಬಾರಿ ಪರಿಶಿಷ್ಟ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡಬೇಕು, ಇದಕ್ಕಾಗಿ ಪರಿಶಿಷ್ಟ ಸಮುದಾಯದ ಎಲ್ಲ 151 ಜಾತಿಯವರೂ ಒಂದಾಗಬೇಕು. ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿ, ಪರಿಶಿಷ್ಟ ಪಂಗಡದಲ್ಲಿ 50 ಉಪ ಜಾತಿಯವರು ಇದ್ದೇವೆ. 2 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಆದರೂ ಇದುವರೆಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಪಕ್ಷಗಳ ಕಾರಣದಿಂದ, ಭಿನ್ನಮತದಿಂದ ಚದುರಿ ಹೋದ ಎಲ್ಲ ಜಾತಿಯವರೂ ಈಗ ಒಂದಾಗಬೇಕು. ಮಠಾಧೀಶರು ಹೇಳಿದವರಿಗೇ ಮತ ಹಾಕಬೇಕು'' ಎಂದು ನಿರ್ಧರಿಸಲಾಯಿತು ಎಂದು ಹೇಳಲಾಗಿದೆ. 

Similar News