ಲೋಕಾಯುಕ್ತ ಅಧಿಕಾರಿಗಳಿಂದ ನೇರ ಪೋನ್-ಇನ್ ಕಾರ್ಯಕ್ರಮ

Update: 2022-12-07 15:03 GMT

ಮಂಗಳೂರು, ಡಿ.7:ದ.ಕ. ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರಿಗೆ ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಲಕ್ಷ್ಮಿಗಣೇಶ್ ಕೆ. ಭ್ರಷ್ಟಾಚಾರ ನಿಗ್ರಹದ ಸಂಬಂಧ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಾರ್ವಜನಿಕರು ಲೋಕಾಯುಕ್ತ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಹಾಗೂ ಇನ್ನಿತರ ಗೌಪ್ಯ ಮಾಹಿತಿಗಳಿದ್ದಲ್ಲಿ ದೂ.ಸಂ: 0824-2950997/0824-2427237 ಮೂಲಕ ಕರೆ ಮಾಡಿ ತಿಳಿಸಬಹುದಾಗಿದೆ. ದ.ಕ.ಜಿಲ್ಲೆಯಲ್ಲಿ ಪ್ರತೀ ತಿಂಗಳ 2ನೇ ಶುಕ್ರವಾರ (ರಜಾದಿನ ಹೊರತು ಪಡಿಸಿ) ಪೂ.11ರಿಂದ ಮಧ್ಯಾಹ್ನ 12ರವರೆಗೆ ಕರೆ ಮಾಡಬಹುದು. ಅದರಂತೆ ಡಿ.9ರಂದು ಜಿಲ್ಲೆಯ ನಾಗರಿಕರು ಇದರ ಸದುಪಯೋಗಪಡಿಸಿ ಕೊಳ್ಳಬಹುದು)

*ಉಡುಪಿ ಜಿಲ್ಲೆಯಲ್ಲಿ ಪ್ರತೀ ತಿಂಗಳ 4ನೇ ಶುಕ್ರವಾರ (ರಜಾದಿನ ಹೊರತು ಪಡಿಸಿ) ಪೂ.11ರಿಂದ ಮಧ್ಯಾಹ್ನ 12ರವರೆಗೆ ಕರೆ ಮಾಡಿ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಮಾಹಿತಿ ನೀಡುವಂತೆ ಲೋಕಾಯುಕ್ತದ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರ ಪ್ರಕಟನೆ ತಿಳಿಸಿದೆ.

Similar News