ಬೆಂಗಳೂರು | ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪ: ಎಸ್ಸೈ ಅಶೋಕ್ ಠಾಕೂರ್, ಎಎಸ್ಸೈ ರಮೇಶ್ ಅಮಾನತು

Update: 2022-12-10 11:47 GMT

ಬೆಂಗಳೂರು: ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪದ ಮೇರೆಗೆ ಓರ್ವ ಎಸ್ಸೈ, ಎಎಸ್ಸೈ ಅಮಾನತು ಮಾಡಿ ಕೇಂದ್ರ ವಿಭಾಗದ ಡಿಸಿಪಿ ಅದೇಶ ಹೊರಡಿಸಿದೆ.

ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆ ಎಸ್ಸೈ ಅಶೋಕ್ ಠಾಕೂರ್, ಹಾಗೂ ಎಎಸ್ಸೈ ರಮೇಶ್ ಸಸ್ಪೆಂಡ್ ಆಗಿರುವ ಪೊಲೀಸರು ಅಧಿಕಾರಿಗಳು.

ಡಿಸೆಂಬರ್ 03ರಂದು ತನ್ನ ಜ್ಯುವೆಲ್ಲರಿ ಶಾಪ್ ಗೆ ಚಿನ್ನ ಕೊಂಡೊಯ್ತಿದ್ದ ಚಿನ್ನದ ವ್ಯಾಪಾರಿಯ ಚಿನ್ನದ ಬ್ಯಾಗ್ ಸಮೇತ ವಶಕ್ಕೆ ಪಡೆದಿದ್ದ ಪೊಲೀಸರು ಠಾಣೆಗೆ ಕರೆದೊಯ್ದರು ಠಾಣೆ ದಾಖಲಾತಿ ಬುಕ್ ನಲ್ಲಿ ಎಂಟ್ರಿ ಮಾಡಿರಲಿಲ್ಲ. ಡಿಸೆಂಬರ್ 3ರ ಬೆಳಗ್ಗೆ 11 ರ ಸುಮಾರಿಗೆ ಟೌನ್ ಹಾಲ್ ಬಳಿಯಿಂದ ವ್ಯಕ್ತಿಯನ್ನು  ಕರೆದೊಯ್ದು, ವ್ಯಾಪಾರಿಯಿಂದ ಹಣ ಪಡೆದು ಚಿನ್ನದ ಬ್ಯಾಗನ್ನು ಕೊಟ್ಟು ಕಳಿಸಿರುವ ಆರೋಪದಡಿ ಅವರನ್ನು ಅಮಾನತು ಮಾಡಿರುವುದಾಗಿ ತಿಳಿದುಬಂದಿದೆ.

Similar News