ತುಮಕೂರು | ದನದ ಕೊಟ್ಟಿಗೆಗೆ ಹಾಲು ಕರೆಯಲು ಹೋದಾಗ ಚಿರತೆ ದಾಳಿ: ಇಬ್ಬರು ಬಾಲಕರಿಗೆ ಗಾಯ, ಆಸ್ಪತ್ರೆಗೆ ದಾಖಲು

Update: 2022-12-10 07:01 GMT

ತುಮಕೂರು: ಇಬ್ಬರು ಬಾಲಕರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.

ಇರಕಸಂದ್ರ ಕಾಲೋನಿಯ ಚೇತನ್ (15), ಧನುಷ್ (13) ಚಿರತೆ ದಾಳಿಗೊಳಗಾದ ಬಾಲಕರು ಎಂದು ಗುರುತಿಸಲಾಗಿದೆ. ದನದ ಕೊಟ್ಟಿಗೆಗೆ  ಹಾಲು ಕರೆಯಲು ಹೋದಾಗ ದಾಳಿ ಮಾಡಿದ ಚಿರತೆ ಕಾಲು, ತೊಡೆ ಇತರ ಭಾಗಗಳಿಗೆ ಗಾಯಗೊಳಿಸಿದೆ.

ಗಾಯಾಳುಗಳನ್ನು ಕರೆದುಕೊಂಡು ಹೋಗಲು ಅವರ ತಂದೆ ಕೆಂಪರಾಜು ಎಂಬವರು 108 ಆಂಬುಲೆನ್ಸ್ ಗೆ ಫೋನ್ ಮಾಡಿದರೂ ನಮ್ಮಲ್ಲಿ ಅಂಬುಲೆನ್ಸ್ ಇಲ್ಲ ತುಮಕೂರಿಗೆ ಕರೆ ಮಾಡಿ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ಖಾಸಗಿ ಕಾರಿನಲ್ಲಿ ಚಿಕಿತ್ಸೆಗೋಸ್ಕರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕೊರಟಗೆರೆ ಕರೆದುಕೊಂಡು ಹೋದಾಗ ಅಲ್ಲಿ ನಿಂತಿರುವ ಎರಡು ಆ್ಯಂಬುಲೆನ್ಸ್ ನೋಡಿ ಅವರ ತಂದೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗೂ ನಡೆಯಿತು.

Similar News